ಭಾರತದ ಸ್ವತಂತ್ರ್ಯ ಹೋರಾಟದಲ್ಲಿ ನಿಜಸ್ಥಿತಿ ಭಾಗ - 01
ನಮಸ್ಕಾರ ಸ್ನೇಹಿತರೇ, ಭಾರತ ತಾಯ್ನಾಡಿಗಾಗಿ ಪ್ರಾಣ ಬಿಟ್ಟ ವೀರರು ಶೂರರಿಗೆ ಜನ್ಮ ನೀಡಿದ ನೆಲ. ಈ ನೆಲದಲ್ಲಿ ಅಖಂಢ ಭಾರತಕ್ಕಾಗಿ ಹೋರಾಡಿ ಮಡಿದ ಸಿಂಹಸ್ವಪ್ನಗಳು ಎಣಿಕೆಗೆ ಸಿಗದಷ್ಟು ಅದಾಗ್ಯೂ ಕೂಡಾ ಚಂದ್ರಶೇಖರ್ ಆಜಾದ, ಮದನಲಾಲ್ ದಿಂಗ್ರಾ ,ಕುದಿರಾಮ್ ಬೊಸ್,ಭಗತ್ಸಿಂಗ್,ಲಾಲಾಲಜಪತ್ ರಾಯ್, ಬಾಲಗಂಗಾಧರ ತಿಲಕ,ಬಿಪಿನ್ ಚಂದ್ರಪಾಲ್ ,ಸುಭಾಷ ಚಂದ್ರಬೋಸ್ ಹೀಗೆ ಹೆಸರುಗಳು ಬೆಳೆಯುತ್ತಾ ಹೊಗುತ್ತದೆ. ಅಂದಹಾಗೆ ಭಾರತ ಸ್ವತಂತ್ರ್ಯದಲ್ಲಿ ಕೇಲವು ಮಹಾಪುರುಷರು ಮುಂಚುಣಿಯಲ್ಲಿದ್ದು ಹೋರಾಟ ನಡೆಸಿದರು. ಅವರ ಹೋರಾಟ ತಟಸ್ಥರೂಪ ತಾಳಿ ಹೋರಾಟವನ್ನ ನಿಷ್ಟ್ರೀಯವಾಗಿಸಿ ಬ್ರಿಟಿಷರು ಅಂದಕೊಂಡದ್ದನ್ನ ಸಾಧಿಸಿ ಭಾರತಕ್ಕೆ ಸ್ವತಂತ್ರ್ಯ ನೀಡ್ತಾರೆ. ಅಂದಹಾಗೆ ಭಾರತಕ್ಕೆ ಸ್ವಾತಂತ್ರ್ಯ ನಿಡುವದು ಬ್ರಿಟಿಷರ ಕನಸಿನಲ್ಲೂ ಇರಲಿಲ್ಲವೆನೊ ಇದಕ್ಕೆಲ್ಲಾ ಯೂರೋಪ್ ದೇಶಗಳ ಒತ್ತಡ ಹಾಗೂ ಭಾರತೀಯರ ಬಿಟ್ಟುಬಿಡದ ತಿವ್ರವಾದ ಹೋರಾಟ ಕೆಲಸ ಮಾಡಿರುತ್ತದೆ.ಬ್ರಿಟಿಷರಿಗೆ ಬಾರತಿಯರಿಗೆ ಸಂಪೂರ್ಣ ಸ್ವತಂತ್ರ್ಯ ನೀಡುವುದಾದರೆ ಬಂಗಾಲ ವಿಭಜನೆ ಮಾಡುತ್ತಿರಲಿಲ್ಲ. ಬ್ರಿಟಿಷರ ವಿರುದ್ಧ ಸಹೋದರರಂತೆ ಒಂದಾಗಿದ್ದ ಹಿಂದು ಮುಸ್ಲಿಂ ರು ಒಗ್ಗಟ್ಟಾಗಿ ಹೋರಾಟ ನಡೆಸಿರು...