Posts

ಭಾರತದಲ್ಲಿ LPG ಗ್ಯಾಸ್ ಕೊರತೆ ಇದೆಯೇ ? ಇಂದಿನ ನಿಜವಾದ ಸ್ಥಿತಿ

                                             ಇತ್ತಿಚಿನ ದಿನಗಳಲ್ಲಿ ಎಲ್.ಪಿ.ಜಿ ಗ್ಯಾಸ್ ಸರಬರಾಜಿನ ಕುರಿತು ಜನರಲ್ಲಿ ಹಲವಾರು ಪ್ರಶ್ನೆಗಳು ಕೇಳಿಬರುತ್ತಿವೆ. ಮನೆಗಳಲ್ಲಿ ಅಡುಗೆ ಮಾಡಲು ಬಳಸುವ ಗ್ರಾಸ್ ಸಿಲಿಂಡರ್ ಸರಿಯಾಗಿ ಸಿಗುತ್ತಿದೆಯೇ ? ದೇಶದಲ್ಲಿ ಗ್ಯಾಸ್ ಕೊರತೆ ಸಮಸ್ಯೆ ಉಂಟಾಗಿದೆಯೇ ? ಆಥವಾ ಇದು ತಾತ್ಕಾಲಿಕ ಸಮಸ್ಯೆಯೇ ? ಎಂಬ ವಿಚಾರಗಳು ಸಾರ್ವಜನಿಕ ಚರ್ಚೆಯ ವಿಷಯ. ಎಲ್.ಪಿ.ಜಿ ಎಂದರೇನು ? ಎಲ್.ಪಿ.ಜಿ  ಎಂದರೆ ದ್ರವೀಕೃತ ಪೆಟ್ರೋಲಿಯಂ ಅನಿಲ. ಭಾರತ ಹಲವು ಕ್ಷೇತ್ರಗಳು, ರೆಸ್ಟೋರೆಂಟ್, ಕೈಗಾರಿಕೆಗಳು, ಮನೆಗಳಲ್ಲಿ ಅಡುಗೆ ಮತ್ತು ‌ಎಲ್.ಪಿ.ಜಿ ಸಿಲಿಂಡರಗಳ ಮೇಲೆ ಅವಲಂಬಿತವಾಗಿದೆ. ಭಾರತದಲ್ಲಿ ಎಲ್.ಪಿ.ಜಿ ಬಳಕೆ ಪ್ರಮಾಣ.        ಭಾರತವು ವಿಶ್ವದಲ್ಲಿಯೇ ಹೆಚ್ಚು ಎಲ್.ಪಿ.ಜೆ ಬಳಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಗ್ರಾಮಿಣ ಪ್ರದೇಶದಲ್ಲಿ ಇಂಧನವನ್ನ (ಸಿಮೆಎಣ್ಣೆ) ಕಡಿಮೆ ಮಾಡಿ ಎಲ್.ಪಿ.ಜಿ ಬಳಕೆಗೆ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ವಿಷೇಶವಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಮೂಲಕ ಹಲವಾರು ಬಡಕುಟುಂಬಗಳಿಗೆ ಉಚಿತ ಅಥವಾ ಸಬ್ಸಿಡಿ ಎಲ್.ಪಿ.ಜಿ ಸಂಪರ್ಕ ಸೌಲಭ್ಯಗಳು ಕೊಟ್ಟಿದೆ. ಇದರಿಂದ  ದೇಶದ ಕಡುಬಡವರು ಕೂಡಾ ಎಲ್.ಪಿ.ಜಿ...

ಆಧುನಿಕ ಪ್ರಪಂಚದಲ್ಲಿ ಪೋಟೊಗ್ರಾಫರ್‌ ಸಂಕಷ್ಟಗಳು.

Image
       ಆಧುನಿಕ ಪ್ರಪಂಚದಲ್ಲಿ ಪೋಟೋಗ್ರಾಫ‌ರ್ ಗಳ ಜೀವನ ಹೊರಗೆ ನೋಡಲು ತುಂಬಾ ಸುಂಧರವಾಗಿ ಕಾಣುತ್ತದೆ. ಆದರೆ ಇವರ ಕ್ಯಾಮರಾ ಹಿಂದೆ ಇರುವ ಕಥೆ ತುಂಬಾ ಕಠಿಣ. ಲಕ್ಷ ಲಕ್ಷ ಖರ್ಚು ಮಾಡಿ ಕ್ಯಾಮೇರಾ,ಲೆನ್ಸ್‌,ಡ್ರೋನ್‌,ಲೈಟ್ಸ್‌ ಎಲ್ಲವನ್ನು ಖರಿದಿಸುತ್ತಾನೆ. ಆದರೆ ಆ ಹಣ ಮರಳಿ ಬರುತ್ತದೆ ಎಂಬ ಖಾತರಿ ಇಲ್ಲ. ಒಂದು ಕಾರ್ಯಕ್ರಮ ಸಿಕ್ಕರೆ ಸಂತೋಷ... ಸಿಗದಿದ್ದರೆ ಸಿಗುವವರೆಗೂ ಕಾಯುವ ಪರಿಸ್ಥಿತಿ. ಸೀಸನ್ ತಿಂಗಳು ಆರ್ಡರ್‌ ಮಾಡಿದರೆ ಇನ್ನೂಳಿದ ತಿಂಗಳಲ್ಲಿ ಕಾಲಿ ಇರುವ ಪರಿಸ್ಥಿತಿ.               ಮಳೆ ಬಂದರು ಹೋಗಬೇಕು,ಬಿಸಿಲು ಇದ್ದರು ಹೋಗಲೇಬೇಕು,ರಾತ್ರಿ 2 ಗಂಟೆ ಅದ್ರು ಇರಬೇಕು 4 ಗಂಟೆಯಾದರು ಇರಬೇಕು. ದುಬಾರಿ ಕ್ಯಾಮರಾಗಳನ್ನ ಹೊತ್ತು ಹಗಲು ರಾತ್ರಿ ಎನ್ನದೆ ಕಾರ್ಯಕ್ರಮಗಳಿಗೆ ಹಾಜರಿರಬೇಕು. ಮದುವೆ ಮನೆಗಳಲ್ಲಿ ಸಂಭ್ರಮಗಳಲ್ಲಿ ಎಲ್ಲರೂ ಸಂಭ್ರಮಿಸಿರುತ್ತಾರೆ, ಪೋಟೋಗ್ರಾಫರ ಮಾತ್ರ ತನ್ನ ಧಣಿವನ್ನ ಮರೆತು ಕೆಲಸ ಮಾಡುತ್ತಿರುತ್ತಾರೆ. ಕೆಲವು ಬಾರಿ ಮೊದಲೇ ಹೇಳಿದಹಾಗೆ ರಾತ್ರಿ ಕೆಲಸ ಮುಗಿಸಿ ಮನೆಗೆ ಮರುಳುವಾ ಕೆಲವು ಬಾರಿ ಕಳ್ಳ ಖದಿಮರು ಪೋಟೋಗ್ರಾಫರ ಮೇಲೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಕ್ಯಾಮಗಳನ್ನ ಕಸಿದುಕೊಂಡು ಹೋಗಿರುವ ಉದಾರಣೆಗಳು ಉಂಟು.           ಒಂದು ಚೆನ್ನಾಗಿರುವ ಪೋಟೋ ಬರಬೇಕಾದರೆ ಅವನು ಗಂಟೆಗಳ ಕಾಲ ಕಾಯುತ್ತಾನೆ. ಒ...

ಬ್ರಿಟಿಷರ Divide and Rule ನೀತಿ: ಬಂಗಾಳ ಮತ್ತು ಪಂಜಾಬ್ ವಿಭಜನೆಯ ನಿಜವಾದ ಇತಿಹಾಸ

Image
                                           ಎರಡು ಭಾಗವಾದ ಬೃಹತ್‌ ರಾಜ್ಯಗಳು: ಬಂಗಾಳ ಮತ್ತು ಪಂಜಾಬ್‌ ವಿಭಜನೆಯ ಕಥೆ         ನಮಸ್ಕಾರ ಸ್ನೇಹಿತರೆ ಬಂಗಾಳ ಮತ್ತು ಪಂಜಾಬ್‌  ಸ್ವಾತಂತ್ರ್ಯ ಭಾರತದ ನತದೃಷ್ಟ ರಾಜ್ಯಗಳು, ಈ ಎರಡು ರಾಜ್ಯಗಳು ಉತ್ತರ ಭಾರತದಲ್ಲೇ ಅಪಾರ ಸಂಪದ್ಬರಿತ ರಾಜ್ಯಗಳು. ಭಾರತ ಸ್ವತಂತ್ರ್ಯ ಚಳುವಳಿಗಳಲ್ಲಿ ಈ ಎರಡು ರಾಜ್ಯಗಳು ಅದ್ವಿತಿಯ ಇತಿಹಾಸ ಹೊಂದಿವೆ. ಅಂದಹಾಗೆ ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅತ್ಯಂತ ನೋವಿದ ಅಧ್ಯಾಯವೆಂದರೆ ಅದು ದೇಶ ವಿಭಜನೆ. 1947 ರಲ್ಲಿ ಭಾರತ ಸ್ವಾತಂತ್ರ್ಯವಾದಾಗ ಸಂತೊಷದ ಜೊತೆಗೆ ಒಂದು ದೊಡ್ಡ ದುಖಃವೂ ಬಂದಿತು,  ದೇಶ ಎರಡು ಭಾಗವಾಗಿ ವಿಭಜನೆಯಾಗಿತ್ತು.ಈ ವಿಭಜನೆಯ ಪರಿಣಾಮವಾಗಿ ಭಾರತ ಎರಡು ದೊಡ್ಡ ಹಾಗೂ ಸಮೃದ್ಧ ಪ್ರದೇಶಗಳಾದ ಬಂಗಾಳ ಮತ್ತು ಪಂಜಾಬ್ ಎರಡು ಭಾಗಗಳಾಗಿ ಹರಿದು ಹೋದವು.       ಈ ವಿಭಜನೆಯ ಹಿಂದೆ ಪ್ರಮುಖ ಪಾತ್ರವಹಿಸಿದವರು ಬ್ರಿಟಿಷರು,ಇವರ ಒಡೆದು ಆಳುವ ನೀತಿ.  ಬಂಗಾಳ ವಿಭಜನೆಯ ವಿಷಬಿಜ        ಬಂಗಾಳ  ಪ್ರದೇಶವು ಬ್ರಿಟಿಷರ ಕಾಲದಲ್ಲಿ ಭಾರತದಲ್ಲೆ ಅತ್ಯಂತ ದೊಡ್ಡ ಮತ್ತು ಸಾಂಸ್ಕೃತೀಕವಾಗಿ ಶ್ರೀಮಂತ ಪ್ರದೇಶವಾ...

ಭಾರತ ಸ್ವತಂತ್ರ್ಯ ಹೋರಾಟದಲ್ಲಿನ ನಿಜಸ್ಥಿತಿ ಭಾಗ-04

Image
                                                                   ಸ್ನೇಹಿತರೆ ಭಾರತ ಸ್ವತಂತ್ರ್ಯ ಪಡೆದುಕೊಳ್ಳುವ  ದಿನ ಹಾಗೂ ಹೋರಾಟದ ಫಲ ಕೈ ಸೇರುವ ದಿನಗಳು ಹತ್ತಿರವಾಗುತ್ತಿದ್ದಂತೆ ಬ್ರಿಟಿಷರು ಸಾಕಿದ ಗಿಣಿ ( ಆಲ್‌ ಇಂಡಿಯಾ ಮುಸ್ಲಿಂ ಲೀಗ್ )‌ ಭಾರತವನ್ನ ಹದ್ದಾಗಿ ಕುಕ್ಕಲು ತಯಾರಿ ನಡೆಸಿತ್ತು. 1906 ರಲ್ಲಿ ರಚನೆಯಾದ ಮುಸ್ಲೀಂ ಲೀಗ್‌ 1947 ರಲ್ಲಿ ಧರ್ಮದ ಅಮಲಿನಲ್ಲಿ ರಾಕ್ಷಸ ರೂಪ ತಾಳಿತ್ತು. ಮತ್ತೊಂದೆಡೆ ಸ್ವಾತಂತ್ರ್ಯಕ್ಕಾಗಿ ಭಾರತೀಯ ನೌಕಪಡೆ ಸೈನಿಕರು ಕೂಡಾ ಬ್ರಿಟಿಷರ ವಿರುದ್ದ ದಂಗೆ ಶುರು ಮಾಡಿದ್ದರು. ಒಟ್ಟಾರೆಯಾಗಿ ಭಾರತದ ಸ್ವಾತಂತ್ರ್ಯ ಹತ್ತಿರ ಬಂದಂತೆ ಮುಸ್ಲಿಂ ಲೀಗ್‌ ಪ್ರತ್ಯೇಕ ಮುಸ್ಲೀಂ ರಾಷ್ಟಕ್ಕಾಗಿ ಕಾದು ಕುಳುತಿತ್ತು. ಮೊದಲಿನಿಂದಲು ಇಂತಹ ಸಮಯಕ್ಕಾ ಕಾದು ಕುಳಿತಿದ್ದ ಬ್ರಿಟಿಷರು, 1911ರಲ್ಲಾದ ಬಂಗಾಳ ವಿಭಜನೆ ರದ್ಧತಿ ಸೇಡನ್ನ ತಿರಿಸಿಕೊಂಡಿತ್ತು. ಅಂದಹಾಗೆ ಹಿಂದುಗಳಿಗೆ ಹಿಂದುಸ್ತಾನ ಮುಸ್ಲಿಮರಿಗೆ ಪಾಕಿಸ್ತಾನ ಮಾಡಿದ್ದರು. ಇಲ್ಲೂ ಕೂಡಾ ಬ್ರಿಟಿಷರು ಭಾರತ ದೊಡ್ಡ ದೊಡ್ಡ ಭೂಭಾಗಗಳನ್ನೆ ವಿಭಾಗ ಮಾಡ್ತಾರೆ. ಬಾರತದಲ್ಲಿದ್ದ ದೊಡ್ಡ ಸಂಪತ್ಬರಿತ ಭೂಭಾಗಳೆಂದು ಗುರುತಿಸಿಕೊಂ...

ಭಾರತ ಸ್ವತಂತ್ರ್ಯ ಹೋರಾಟದಲ್ಲಿನ ನಿಜಸ್ಥಿತಿ ಭಾಗ-03

Image
                                                  ಸ್ನೇಹಿತರೇ ಬಂಗಾಳ ವಿಭಜನೆ ರದ್ದತಿಯಾದ ನಂತರ ಭಾರತೀಯ ಹೋರಾಟಗಾರರಿಗೆ ಒಂದು ದೊಡ್ಡ ಮನೊಬಲ ಬರುತ್ತದೆ. ಹಾಗೆಯೇ ಸ್ವತಂತ್ರ್ಯ ಹೋರಾಟ ನಿರ್ಣಾಯಕ ಘಟ್ಟಕ್ಕೆ ತಲುಪಿತು. ಈ ಅವಧಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಕೇಲವ ಮೇಲ್ವರ್ಗದ ಚರ್ಚೆಯಾಗಿ ಉಳಿಯದೆ. ಸಾಮಾನ್ಯ ಜನರ ಚಳುವಳಿಯಾಗಿ ಮಾರ್ಪಟ್ಟಿತು. ಈ ಬದಲಾವಣೆಯಲ್ಲಿ ಲಾಲ್-ಬಾಲ್-ಪಾಲ್‌ ಇವರ ಪಾತ್ರ ದೊಡ್ಡದಿರುತ್ತದೆ.            ಅಂದಹಾಗೆ 1911 ರಲ್ಲಿ ಬಂಗಾಳ ವಿಭಜನೆ ರದ್ದತಿ ನಂತರ ರಾಜಧಾನಿಯನ್ನ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು. ಇದಾದ ನಂತರ  ರೌಲತ್‌ ಕಾಯಿದೆ ಮತ್ತು ಜಾಲಿಯನ್‌ ವಾಲ್‌ ಭಾಗ ಹತ್ಯಾಕಾಂಡ ಹೀಗೆ ಬ್ರಿಟಿಷರ ದಮನಕಾರಿ ನೀತಿಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದವು.       ಅಸಹಕಾರ ಚಳುವಳಿ 1920-22 ಗಾಂಧಿಜಿ ಯವರ ನೇತೃತ್ವದಲ್ಲಿ ನಡೆದ ಈ ಬೃಹತ್‌ ಚಳುವಳಿಗೆ ಲಾಲ್-ಬಾಲ್-ಪಾಲ್‌ ಇವರು ಹಾಕಿಕೊಟ್ಟ ಸ್ವದೇಶಿ  ತತ್ವ ವೇ ಅಡಿಪಾಯವಾಗಿತ್ತು.                ಲಾಲ್-ಬಾಲ್-ಪಾಲ್‌ ಈ ಮೂವರು ನಾಯಕರು ಕಾಂಗ್...

ಭಾರತ ಸ್ವತಂತ್ರ್ಯ ಹೋರಾಟದಲ್ಲಿನ ನಿಜಸ್ಥಿತಿ ಭಾಗ-02

Image
                                                          ಭಾರತದ ಸ್ವತಂತ್ರ್ಯ ಚಳುವಳಿಗಳಲ್ಲಿ ಎಂತಹ ಹೋರಾಟಗಳು ನಡೆದರು ಬ್ರಿಟಿಷರು ಅದನ್ನ ಹತ್ತಿಕ್ಕುತ್ತಲೇ ಬಂದಿರ್ತಾರೆ. ಅದ್ಯಾವದಕ್ಕೂ  ಜಗ್ಗದ ಬಾರತೀಯರು ಹೋರಾಟಗಳನ್ನ ನಡೆಸುತ್ತಲೇ ಇರ್ತಾರೆ. ಅದು ಬಂಗಾಳ ವಿಭಜನೆ, ಇದು ಭಾರತದ ಮೊದಲ ವಿಭಜನೆ ಎಂದರೆ ತಪ್ಪಾಗಲಿಕ್ಕಿಲ್ಲ ಈ ವಿಭಜನೆ ರಾಷ್ಟ್ರೀಯವಾದದ ಉದ್ದೇಶವನ್ನ ದುರ್ಬಲಗೊಳಿಸಿತು ಹಾಗೂ ಹಿಂದು ಮುಸ್ಲೀಂ ಮುಖಂಡರುಗಳಲ್ಲಿ ಮತ್ತು ಸಾರ್ವಜನಿಕರ ನಾವು ಬೇರೆ ಬೇರೆ ಎನ್ನುವ ಮನಸ್ಥಿತಿಯನ್ನ ಹುಟ್ಟುಹಾಕಿತು. ಇದಕ್ಕೆ ಇನ್ನೊಂದು ಕಾರಣವು ಅದುವೇ ಮುಸ್ಲಿಂ ಲೀಗ್.            ಸ್ನೇಹಿತರೇ ಮುಸ್ಲಿಂ ಲೀಗ್‌ ನ್ನು ಬಂಗಾಳದ ನವಾಬ ಖ್ವಾಜಾ ಸಲೀಮುಲ್ಲಾ,ಆಗಾ ಖಾನ್‌, ನವಾಬ್‌  ಉಲ್-ಮಲ್ಕ್‌ ಇವರುಗಳು ಡಿಸೆಂಬರ್‌ 30 1906 ರಲ್ಲಿ ಡಾಕಾದಲ್ಲಿ  ಸ್ಥಾಪನೆ ಮಾಡ್ತಾರೆ. ಇವರ ನೇತೃತ್ವದಲ್ಲಿ ಮುಸ್ಲಿಮರ ರಾಜಕೀಯ ಹಕ್ಕನ್ನ ರಕ್ಷಿಸಿ ಇವರು ಬ್ರಿಟಿಷ್‌ ಸರ್ಕಾರಕ್ಕೆ ನಿಷ್ಠೆಯನ್ನ ವ್ಯಕ್ತಪಡಿಸುವ ಉದ್ದೇಶದಿಂದ ಇದನ್ನ ಸ್ಥಾಪಿಸಲಾಯಿತು.        ಅಂದಹಾಗೆ ಈ ಮುಸ್ಲಿಂ ಲೀಗ್‌...

ಭಾರತದ ಸ್ವತಂತ್ರ್ಯ ಹೋರಾಟದಲ್ಲಿ ನಿಜಸ್ಥಿತಿ ಭಾಗ - 01

Image
                              ನಮಸ್ಕಾರ ಸ್ನೇಹಿತರೇ, "ಭಾರತ" ತಾಯ್ನಾಡಿಗಾಗಿ ಪ್ರಾಣ ಬಿಟ್ಟ ವೀರರು ಶೂರರಿಗೆ ಜನ್ಮ ನೀಡಿದ ಪುಣ್ಯಭೂಮಿ. ಈ ಭೂಮಿಯಲ್ಲಿ ಅಖಂಢ ಭಾರತಕ್ಕಾಗಿ ಹೋರಾಡಿ ಮಡಿದ ಸಿಂಹಸ್ವಪ್ನಗಳು ಎಣಿಕೆಗೆ ಸಿಗದಷ್ಟು ಅದಾಗ್ಯೂ ಕೂಡಾ ಚಂದ್ರಶೇಖರ್‌ ಆಜಾದ, ಮದನಲಾಲ್‌ ದಿಂಗ್ರಾ ,ಕುದಿರಾಮ್‌ ಬೊಸ್‌,ಭಗತ್‌ಸಿಂಗ್‌,ಲಾಲಾಲಜಪತ್‌ ರಾಯ್‌, ಬಾಲಗಂಗಾಧರ ತಿಲಕ,ಬಿಪಿನ್‌ ಚಂದ್ರಪಾಲ್ ‌,ಸುಭಾಷ‌ ಚಂದ್ರಬೋಸ್ ಹೀಗೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ  ಹೆಸರುಗಳು ಬೆಳೆಯುತ್ತಾ ಹೊಗುತ್ತವೆ. ಅಂದಹಾಗೆ ಭಾರತ ಸ್ವಾತಂತ್ರ್ಯದಲ್ಲಿ ಕೇಲವು ಮಹಾಪುರುಷರು ಮುಂಚುಣಿಯಲ್ಲಿದ್ದು ಹೋರಾಟ ನಡೆಸಿದರು. ಅವರ ಹೋರಾಟ ತಟಸ್ಥರೂಪ ತಾಳಿ ಹೋರಾಟವನ್ನ ನಿಷ್ಟ್ರೀಯವಾಗಿಸಿ ಬ್ರಿಟಿಷರು ಅಂದಕೊಂಡದ್ದನ್ನ ಸಾಧಿಸಿ ಭಾರತಕ್ಕೆ ಸ್ವಾತಂತ್ರ್ಯ ನೀಡ್ತಾರೆ.            ಅಂದಹಾಗೆ ಭಾರತಕ್ಕೆ ಸ್ವಾತಂತ್ರ್ಯ ನಿಡುವದು ಬ್ರಿಟಿಷರ ಕನಸಿನಲ್ಲೂ ಇರಲಿಲ್ಲವೆನೊ ಇದಕ್ಕೆಲ್ಲಾ ಯೂರೋಪ್‌ ದೇಶಗಳ ಒತ್ತಡ ಹಾಗೂ ಭಾರತೀಯರ ಬಿಟ್ಟುಬಿಡದ ತಿವ್ರವಾದ ಹೋರಾಟಗಳಿಂದಾಗಿ ಬಾರತಕ್ಕೆ ಸ್ವಾತಂತ್ರ್ಯ ಸಿಗುತ್ತದೆ. ಬಾರತಿಯರಿಗೆ ಬ್ರಿಟಿಷರು ಸಂಪೂರ್ಣ ಸ್ವಾತಂತ್ರ್ಯ ನೀಡುವುದಾದರೆ ಬಂಗಾಳ ವಿಭಜನೆ ಮಾಡುತ್ತಿರಲಿಲ್ಲ. ಬ್ರಿಟಿಷರ ವಿರುದ್ಧ...