ಭಾರತ ಸ್ವತಂತ್ರ್ಯ ಹೋರಾಟದಲ್ಲಿನ ನಿಜಸ್ಥಿತಿ ಭಾಗ-04
ಸ್ನೇಹಿತರೆ ಭಾರತ ಸ್ವತಂತ್ರ್ಯ ಪಡೆದುಕೊಳ್ಳುವ ದಿನ ಹಾಗೂ ಹೋರಾಟದ ಫಲ ಕೈ ಸೇರುವ ದಿನಗಳು ಹತ್ತಿರವಾಗುತ್ತಿದ್ದಂತೆ ಬ್ರಿಟಿಷರು ಸಾಕಿದ ಗಿಣಿ (ಆಲ್ ಇಂಡಿಯಾ ಮುಸ್ಲಿಂ ಲೀಗ್) ಭಾರತವನ್ನ ಹದ್ದಾಗಿ ಕುಕ್ಕಲು ತಯಾರಿ ನಡೆಸಿತ್ತು. 1906 ರಲ್ಲಿ ರಚನೆಯಾದ ಮುಸ್ಲೀಂ ಲೀಗ್ 1947 ರಲ್ಲಿ ಧರ್ಮದ ಅಮಲಿನಲ್ಲಿ ರಾಕ್ಷಸ ರೂಪ ತಾಳಿತ್ತು. ಮತ್ತೊಂದೆಡೆ ಸ್ವಾತಂತ್ರ್ಯಕ್ಕಾಗಿ ಭಾರತೀಯ ನೌಕಪಡೆ ಸೈನಿಕರು ಕೂಡಾ ಬ್ರಿಟಿಷರ ವಿರುದ್ದ ದಂಗೆ ಶುರು ಮಾಡಿದ್ದರು. ಒಟ್ಟಾರೆಯಾಗಿ ಭಾರತದ ಸ್ವತಂತ್ರ್ಯ ಹತ್ತಿರ ಬಂದಂತೆ ಮುಸ್ಲಿಂ ಲೀಗ್ ಪ್ರತ್ಯೇಕ ಮುಸ್ಲೀಂ ರಾಷ್ಟಕ್ಕಾಗಿ ಕಾದು ಕುಳುತಿತ್ತು. ಮೊದಲಿನಿಂದಲು ಇಂತಹ ಸಮಯಕ್ಕಾ ಕಾದು ಕುಳಿತಿದ್ದ ಬ್ರಿಟಿಷರು. 1911ರಲ್ಲಾದ ಬಂಗಾಳ ವಿಭಜನೆ ರದ್ಧತಿ ಸೇಡನ್ನ ತಿರಿಸಿಕೊಂಡಿತ್ತು. ಅಂದಹಾಗೆ ಹಿಂದುಗಳಿಗೆ ಹಿಂದುಸ್ತಾನ ಮುಸ್ಲಿಮರಿಗೆ ಪಾಕಿಸ್ತಾನ ಮಾಡಿದ್ದರು. ಇಲ್ಲೂ ಕೂಡಾ ಬ್ರಿಟಿಷರು ಭಾರತ ದೊಡ್ಡ ದೊಡ್ಡ ಭೂಭಾಗಗಳನ್ನೆ ವಿಭಾಗ ಮಾಡ್ತಾರೆ. ಬಾರತದಲ್ಲಿದ್ದ ದೊಡ್ಡ ಸಂಪತ್ಬರಿತ ಭೂಭಾಗಳೆಂದು ಗುರುತಿಸಿಕೊಂಡಿದ್ದ, ದೊಡ್ಡ ರಾಜ್ಯಗಳಾದ ಬಂಗಾಳವನ್ನ ಮತ್ತು ತನ್ನದೇ ಆದ ಇತಿಹಾಸ ಹೊಂದಿದ ಪಂಜಾಬ್ ರಾಜ್ಯಗಳನ್ನ ಭಾಗ ಮಾಡಿ ಪಾಕಿಸ್ತಾನಕ್ಕೆ ನಿಡಲಾಗುತ್ತದೆ. ಇಲ್ಲಿ ಫಲವತ್ತಾದ ಭೂಭಾಗಗಳು ಭಾರತದ ಕೈತಪ್ಪಿಹೋದವು.
ಅಂದಹಾಗೆ ಭಾರತದ ಸ್ವತಂತ್ರ್ಯಕ್ಕೆ ಹಲವು ಕಾರಣಗಳಿದ್ದವು,
- ದ್ವಿತಿಯ ಮಹಾಯುದ್ಧದಲ್ಲಿ ಬ್ರಿಟನ್ ಆರ್ಥಿಕವಾಗಿ ದಿವಾಳಿಯಾಗಿತ್ತು ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಆಡಳಿತ ಮುಂದುವರೆಸಲು ಕಷ್ಟವಾಗಿತ್ತು.
- ಮುಂಬೈ ಸೇರಿದಂತೆ ಅನೇಕ ಬಂಧರುಗಳಲ್ಲಿ ನೌಕಾಪಡೆಯ ಸೈನಿಕರು ಬ್ರಿಟಿಷರ ವಿರುದ್ಧ ದಂಗೆಯೆದ್ದರು.
- ದ್ವಿತಿಯ ಮಹಾಯುದ್ಧದ ನಂತರ ಆದ ಒಪ್ಪಂದಗಳು ವಸಾಹತು ಯೂರೋಪ್ನ ಯಾವ ದೇಶಗಳು ವಸಾಹತುಗಳನ್ನ ಹೊಂದುವಂತಿಲ್ಲ.
- ಭಾರತೀಯರು ಕಾಲನಂತರದಲ್ಲಿ ಶೈಕ್ಷಣಿಕವಾಗಿ ಪ್ರಬುದ್ಧರಾಗಿದ್ದರು. ಬ್ರಿಟಿಷರ ಎಲ್ಲಾ ಕುತಂತ್ರಗಳನ್ನ ಗಮನಿಸುತ್ತಿದ್ದರು.
