ಬ್ರಿಟಿಷರ Divide and Rule ನೀತಿ: ಬಂಗಾಳ ಮತ್ತು ಪಂಜಾಬ್ ವಿಭಜನೆಯ ನಿಜವಾದ ಇತಿಹಾಸ

                                   

       ಎರಡು ಭಾಗವಾದ ಬೃಹತ್‌ ರಾಜ್ಯಗಳು: ಬಂಗಾಳ ಮತ್ತು ಪಂಜಾಬ್‌ ವಿಭಜನೆಯ ಕಥೆ

        ನಮಸ್ಕಾರ ಸ್ನೇಹಿತರೆ ಬಂಗಾಳ ಮತ್ತು ಪಂಜಾಬ್‌  ಸ್ವಾತಂತ್ರ್ಯ ಭಾರತದ ನತದೃಷ್ಟ ರಾಜ್ಯಗಳು, ಈ ಎರಡು ರಾಜ್ಯಗಳು ಉತ್ತರ ಭಾರತದಲ್ಲೇ ಅಪಾರ ಸಂಪದ್ಬರಿತ ರಾಜ್ಯಗಳು. ಭಾರತ ಸ್ವತಂತ್ರ್ಯ ಚಳುವಳಿಗಳಲ್ಲಿ ಈ ಎರಡು ರಾಜ್ಯಗಳು ಅದ್ವಿತಿಯ ಇತಿಹಾಸ ಹೊಂದಿವೆ. ಅಂದಹಾಗೆ ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅತ್ಯಂತ ನೋವಿದ ಅಧ್ಯಾಯವೆಂದರೆ ಅದು ದೇಶ ವಿಭಜನೆ. 1947 ರಲ್ಲಿ ಭಾರತ ಸ್ವಾತಂತ್ರ್ಯವಾದಾಗ ಸಂತೊಷದ ಜೊತೆಗೆ ಒಂದು ದೊಡ್ಡ ದುಖಃವೂ ಬಂದಿತು,  ದೇಶ ಎರಡು ಭಾಗವಾಗಿ ವಿಭಜನೆಯಾಗಿತ್ತು.ಈ ವಿಭಜನೆಯ ಪರಿಣಾಮವಾಗಿ ಭಾರತ ಎರಡು ದೊಡ್ಡ ಹಾಗೂ ಸಮೃದ್ಧ ಪ್ರದೇಶಗಳಾದ ಬಂಗಾಳ ಮತ್ತು ಪಂಜಾಬ್ ಎರಡು ಭಾಗಗಳಾಗಿ ಹರಿದು ಹೋದವು. 

     ಈ ವಿಭಜನೆಯ ಹಿಂದೆ ಪ್ರಮುಖ ಪಾತ್ರವಹಿಸಿದವರು ಬ್ರಿಟಿಷರು,ಇವರ ಒಡೆದು ಆಳುವ ನೀತಿ. 

ಬಂಗಾಳ ವಿಭಜನೆಯ ವಿಷಬಿಜ

       ಬಂಗಾಳ  ಪ್ರದೇಶವು ಬ್ರಿಟಿಷರ ಕಾಲದಲ್ಲಿ ಭಾರತದಲ್ಲೆ ಅತ್ಯಂತ ದೊಡ್ಡ ಮತ್ತು ಸಾಂಸ್ಕೃತೀಕವಾಗಿ ಶ್ರೀಮಂತ ಪ್ರದೇಶವಾಗಿತ್ತು. 1905 ರಲ್ಲಿ ಬ್ರೀಟಿಷ  ವೈಸ್ರಾಯ್‌ ಲಾರ್ಡ ಕರ್ಜನ್‌ ಬಂಗಾಳವನ್ನ ಎರಡು ಭಾಗವಾಗಿ ವಿಭಜಿಸಿದನು.

  • ಪೂರ್ವಬಂಗಾಳ - ಹೆಚ್ಚಿನ ಮುಸ್ಲಿಂ ಜನಸಂಖ್ಯೆ
  • ಪಶ್ಚಿಮ ಬಂಗಾಳ- ಹೆಚ್ಚಿನ ಹಿಂದೂ ಜನಸಂಖ್ಯೆ
           ಈ ಕ್ರಮವನ್ನ ಆಡಳಿಯ ಸುಲಭವಾಗಿಸಲು ಮಾಡಲಾಗಿದೆ ಎಂದು ಹೇಳಲಾಯಿತು.ಆದರೆ ನಿಜವಾಗಿ ಇದು ಜನರ ನಡುವೆ ಧರ್ಮದ ಆಧಾರದ ಮೇಲೆ ಭೇದಭಾವ, ಕೋಮುದಳ್ಳುರಿ ಸೃಷ್ಠಿಸಲು ಮಾಡಿದ ರಾಜಕೀಯ ಕ್ರಮವಾಗಿತ್ತು.ಈ ಕ್ರಮದ ವಿರುದ್ಧ ದೇಶದೆಲ್ಲೇ ಭಾರಿ ವಿರೋಧ ವ್ಯಕ್ತವಾದ ಹಿನ್ನಲೇ 1911 ರಲ್ಲಿ ಬಂಗಾಳ ವಿಭಜನೆಯನ್ನ ತಾತ್ಕಾಲಿಕವಾಗಿ ರದ್ದುಪಡಿಸಲಾಯಿತು.

ಪಂಜಾಬ್‌ ವಿಭಜನೆಯ ನೋವು

       1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯುವ ಸಮಯದಲ್ಲಿ ಮತ್ತೊಮ್ಮೆ ದೊಡ್ಡ ವಿಭಜನೆ ನಡೆಯಿತು. ಈ ಬಾರಿ ದೇಶವೇ ಎರಡು ರಾಷ್ಟ್ರಗಳಾಗಿ ವಿಭಜನೆಯಾಯಿತು  
  • ಭಾರತ -ಪಾಕಿಸ್ತಾನ 
ಈ ಸಂಧರ್ಭದಲ್ಲಿ ಪಂಜಾಬ್‌ ರಾಜ್ಯವೂ ಎರಡು ಭಾಗಗಳಾಗಿ ಹಂಚಲ್ಪಟ್ಟಿತು.
  •  ಪೂರ್ವ‌ ಪಂಜಾಬ್ - ಭಾರತಕ್ಕೆ
  • ಪಶ್ಛಿಮ ಪಂಜಾಬ್‌ - ಪಾಕಿಸ್ತಾನಕ್ಕೆ
        ಗಡಿಯನ್ನ ನಿರ್ಧರಿಸಲು cyril radclifee ಅವರನ್ನ ಬ್ರಿಟಿಷ್‌ ಸರ್ಕಾರ ನೇಮಿಸುತ್ತದೆ.  ಇರುವ ರಚಿಸಿದ ಗಡಿಯನ್ನ  Radclifee ಗಡಿ ಎಂದು ಕರೆಯಲಾಗುತ್ತದೆ.
ಈ ಭಾರತ ಪಾಕಿಸ್ತಾನ ಗಡಿಯನ್ನ ಕೆಲವೇ  ವಾರಗಳಲ್ಲಿ ನಿರ್ಧರಿಸಲಾಯಿತು. ನಂತರ ಇವರು ರಚಿಸಿದ ಗಡಿಯಿಂದಾದ ಪರಿಣಾಮ ಅತ್ಯಂತ ಭೀಕರವಾಗಿತ್ತು. ಪಶ್ಚಿಮದಲ್ಲಿ  ಬಾರತದ ಭೂ ಗಡಿಯನ್ನ ಸಂಪೂರ್ಣ ಪಾಕಿಸ್ತಾನಕ್ಕೆ ಹೊಂದಿಸಲಾಯಿತು.  

ಮಾನವಿಯ ದುರಂತ :- ಬಂಗಾಳ ಮತ್ತು ಪಂಜಾಬ್‌ ವಿಭಜನೆಯ ಪರಿಣಾಮದಿಂದಾಗಿ ಲಕ್ಷಾಂತರ ಜನ ತಮ್ಮ ಮನೆಗಳನ್ನ ಬಿಟ್ಟು ಓಡಬೇಕಾಯಿತು

ಇತಿಹಾಸಕಾರರ ಪ್ರಕಾರ
  •  ಸುಮಾರು 1.4 ಕೋಟಿ ಜನರು ವಲಸೆ ಹೊದರು.
  • ಸುಮಾರು 10 ಲಕ್ಷ ಜನರು ಹಿಂದು ಮುಸ್ಲಿಂ ಹಿಂಸಾಚಾರದಲ್ಲಿ ಸಾವನ್ನಪ್ಪಿದರು.
  • ಇದು ಮಾನವ ಇತಿಹಾಸದಲ್ಲೆ ಅತಿದೊಡ್ಡ ವಲಸೆ ಘಟನೆಯಾಗಿದೆ.
ಬ್ರಿಟಿಷರ ಒಡೆದು ಆಳುವ ನೀತಿಯ ಪರಿಣಾಮಗಳು :-
  • ಧರ್ಮದ ಆಧಾರದ ಮೇಲೆ ಸಮಾಜ ವಿಭಜನೆಗೊಂಡಿತು.
  • ಧರ್ಮಗಳ ಮದ್ಯೆ ಹಿಂಸಾಚಾರ ಮತ್ತು ದ್ವೇಷ ಹೆಚ್ಚಾಯಿತು.
  • ಬಂಗಾಳ ಮತ್ತು ಪಂಜಾಬ್‌ ಎರಡು ದೊಡ್ಡ ಸಮೃದ್ಧ ಪ್ರದೇಶಗಳು ಎರಡು ಬಾಗಗಳಾದವು.
  • ಇಂದು ಕೂಡಾ ಈ ವಿಭಜನೆಯ ಗಾಯಗಳು ಸಂಪೂರ್ಣವಾಗಿ ಗುಣವಾಗಿಲ್ಲ.
  • ಬಾರತದ ಭೂಬಾಗವಾದ ಪಾಕಿಸ್ತಾನ ಇಂದು ಉಗ್ರರ ಕಪಿಮುಷ್ಠಿಯಲ್ಲಿದೆ.
  • ಬಾಂಗ್ಲಾದೇಶ ಒಂದು ಚಿಕ್ಕರಾಷ್ಟವಾಗಿದ್ದರು ಅಲ್ಲಿ ಗಲಬೆಗಳು ಹೆಚ್ಚಾಗುತ್ತಿವೆ. 
 ಮೇಲಿನ ಎಲ್ಲಾ ಅಂಶಗಳು ಇತಿಹಾಸ ನಮಗೆ ಕಲಿಸುವ ಪಾಠವಾಗಿವೆ. ರಾಜಕೀಯ ಲಾಭಕ್ಕಾಗಿ ಸಮಾಜವನ್ನ ವಿಭಜಿಸಿದರೆ ಅದರ ಪರಿಣಾಮ ಹಲವು ಪಿಳಿಗೆವರೆಗೆ ಉಳಿಯುತ್ತದೆ. ಮೇಲಿನ ಎಲ್ಲಾ ಸಮಸ್ಯೆಗಳಿಗೆ   ಕಾರಣರಾರು.. ?



Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?