Skip to main content

“ಸಿಂಧುನದಿ ಜನರ ಕುರಿತ ಕಥೆ”

 


ಸಂಜೆ ತಂಪಾದ ತಂಗಾಳಿಯಲಿ ರಪರಪ ಅಂತಾ ಮಳೆ ಬರುತ್ತಿತ್ತು ಮನೆಯ ಒಳಗಡೆ, ಮಳೆ ನಿಂತ ನಂತರ ಜಿನಿ ಜಿನಿ ಹನಿಯ ಮಧ್ಯೆ ಮೊಮ್ಮಗನು ಅಜ್ಜಿಗೆ ಕೇಳಿದ

"ಅಜ್ಜಿ, ನಮ್ಮಲ್ಲಿ ಮೊದಲು ಜನ ಹೇಗೆ ಬದುಕ್ತಿದ್ರು?"

ಅಜ್ಜಿ ನಗುತ್ತಾ ತನ್ನ ಕೈಯಲ್ಲಿ ಮೊಮ್ಮಗನ ಕೈ ಹಿಡಿದಳು

"ಹಾ ಬಂಗಾರಿ ಕೇಳು ಹೇಳ್ತಿನಿ ......

ಸಾವಿರಾರು ವರ್ಷಗಳ ಹಿಂದೆ, ಸಿಂಧು ನದಿಯ ಬಳಿ ಒಂದು ಚಿಕ್ಕ ಹುಡುಗನೂ, ಅವನ ತಾಯಿಯೂ, ದೊಡ್ಡ ಪಟ್ಟಣದಲ್ಲಿದ್ದವರು. ಊರಿನ ಹೆಸರು ಹಾರಪ್ಪಾ."

 "ಹಾರಪ್ಪಾ?" ಕಣ್ಣು ಪಿಳಕಿಸುತ್ತಾ ಮಗು ಕೂತೂಹಲದಿಂದ ಕೇಳಿದ ಹೌದಾ.

 "ಹೌದು. ಅಲ್ಲಿನ ಮನೆಗಳು ಭದ್ರವಾಗಿ ಕಟ್ಟಲ್ಪಟ್ಟಿದವು. ಹೊಟೆಲ್ ಇಲ್ಲ, ಆದರೆ ಮನೆಮನೆಗೆ ಕೊಳಾಯಿ ನೀರಿನ ಹೊಂಡಡ್ರೈನೇಜ್ ವ್ಯವಸ್ಥೆಯೂ ಇತ್ತು. ಎಲ್ಲವೂ ಉತ್ತಮವಾಗಿ ಪ್ಲಾನ್ ಮಾಡಿ ನಿರ್ಮಿಸಿದ್ದಂಥದು!"

 "ಅವರು ಸ್ಕೂಲ್ ಗೆ ಹೋಗ್ತಿದ್ರಾ?"

ಹೌದು "ಹುಡುಗರಿಗೆ ಕಸರತ್ತು, ಕುರಕುಶಲತೆ ಕಲಿಸುವ ಪಾಠಶಾಲೆಯಂಥ ವ್ಯವಸ್ಥೆ ಇತ್ತು. ಕೆಲವರು ಮಣ್ಣಿನಲ್ಲಿ ಬಾವುಟ, ಬೊಂಬೆ, ಚಿಲುಮೆ ಮಾಡ್ತಿದ್ರು. ಇನ್ನೂ ಕೆಲವು ಜನರು ಪೆಪ್ಪರ್ ಅಥವಾ ಹತ್ತಿ ವ್ಯಾಪಾರ ಮಾಡ್ತಿದ್ರು."

"ಆದ್ರೆ ಅವರಿಗೆ ಫೋನ್ ಇರ್ಲಿಲ್ಲ ಅಲ್ವಾ?"

 ಅಜ್ಜಿ ನಸುನಕ್ಕಳು. "ಅವರ ಬಳಿ ಇವತ್ತಿನ ಫೋನ್ ಇರ್ಲಿಲ್ಲ, ಆದರೆ ಮುದ್ರೆಗಳು ಇತ್ತು. ಗೋಪುರದ ಆಕಾರದ ತಾಮ್ರದ ಮೇಲೆ ಚಿಹ್ನೆಗಳು. ಅದು ಅವರ ಲೆಕ್ಕಪತ್ರದಲ್ಲಿ ಭಾಷೆ ಉಪಯೋಗಿಸುತ್ತಿದ್ದರು." ಇನ್ನೂ ಅನೇಕ ಪ್ರಾಚೀನ ವಿಧ್ಯೆಗಳನ್ನ ಕಲಿತಿದ್ದರು.

 "ಅವ್ರು ಯುದ್ಧ ಮಾಡ್ತಿದ್ರಾ ಅಜ್ಜಿ?"

 "ಅದೋಂದು ತಾಳ್ಮೇಯ ಶಕ್ತಿ ಬಂಗಾರಿಅವರು ಶಾಂತಿಯುತವಾಗಿ ಬದುಕಿದವರು. ಸಿಂಧು ನಾಗರಿಕತೆಯದು ಕಲಿಕೆ, ಶಿಸ್ತಿನ ಮತ್ತು ಸಹವಾಸದ ಕಾಲ. ನಿನ್ನಂತೆ ಪುಟ್ಟ ಮಕ್ಕಳ ಭವಿಷ್ಯಕ್ಕಾಗಿ ಅವರು ಶ್ರಮ ಪಟ್ಟಿದ್ರು."

 ಅಜ್ಜಿ ಕೊನೆಗೆ ಹೇಳಿದರು

"ಇಂದು ನಾವು ಕಟ್ಟಿದ ಕಟ್ಟಡಗಳಲ್ಲಿ ಇರುತ್ತೇವೆ,ಚೆನ್ನಾಗಿ ಜೀವನ ನಡೆಸಿ ಉತ್ತಮ ಸಮಾಜದಲ್ಲಿ ನಾಗರಿಕರಾಗಿದ್ದೇವೆ ಎಂದರೆ, ಅದು ಶ್ರೇಷ್ಠ ನಾಗರಿಕರು ಬಿತ್ತಿದ ಮಾನವೀಯತೆಯ ಬೀಜದಿಂದಲೇ ಎಲ್ಲವೂ ಬೆಳೆದಿವೆ."

 ಮಗುವಿನ ಕಣ್ಣು ಮಿಂಚಿತುಕಥೆಯಿಂದ ಪ್ರೇರಣೆ ಪಡೆದ ಮಗು  "ನಾನು ಕೂಡ ಏಂತಹ  ಕತ್ತಲಿನಂತಹ ಜೀವನದಲ್ಲಿ ಬೆಳಕು ಬೀರುವನಾಗ್ತೀನಿ ಅಜ್ಜಿ!"ಎಂದು ಹೇಳಿತು.


ಧನ್ಯವಾದಗಳು.. 

Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...