Skip to main content

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.


                ವಿಜಯನಗರ ಸಾಮ್ರಾಜ್ಯ ತನ್ನ ಗತವೈಭತೆಯ ಶಿಖರದಲ್ಲಿದ್ದ ಕಾಲವೊಂದಿತ್ತು. ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು. ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ. ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ, ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ ಒಲಿದಿತ್ತು.

ಒಂದು ದಿನರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು. ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು ಕಾಯಕಕ್ಕೆ ಸಿದ್ಧರಾಗಿದ್ದರು, ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು. ಆತನಿಗೆ ಅವಕಾಶ ಕೊಡಲಾಯಿತು.

ಶಿವಣ್ಣನು ಹಂಪೆಗೆ ಹೋಗಿ, ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ  ಶಿಲ್ಪಗಳನ್ನ ನಿರ್ಮಿಸಿದ.  ಇದರಲ್ಲಿ ವಿಶೇಷ ಎನ್ನುವಂತ ಶಿಲ್ಪವೂ ಇತ್ತು ಅದು ದೇವಸ್ಥಾನದ ಗೋಪುರದ ನಡುವೆ ಬಿಂಬಿತವಾಗುವ ಶಿಲ್ಪವಾಗಿತ್ತು, ಸೂರ್ಯನಿಂದ ಪ್ರಕಾಶಮಾನವಾಗುವ ಬೆಳಕು ಗೋಪುರದ ಮೇಲೆ ಬಿದ್ದು, ಆ ಬೆಳಕಿನ ನೆರಳಿನಿಂದ ಮತ್ತೊಂದು ಚಿತ್ರ ಸೃಷ್ಠಿಯಾಗಿತ್ತು, ಶಿವಣ್ಣ ರಚಿಸಿದ ಶಿಲ್ಪ ಉಲ್ಟಾ ರೀತಿಯಲ್ಲಿ ದೇವಸ್ಥಾನದ ಮತ್ತೊಂದು ಗೋಡೆಯ ಮೇಲೆ ಅಮೋಘವಾಗಿ ಕಂಡುಬಂದಿತ್ತು. ಈ ಶಿಲ್ಪ ಸಾಕಷ್ಟು ಅಧ್ಬುತ ಮತ್ತು ಹೊಸ ಬಗೆಯ ಸೃಜನಶೀಲತೆಯಿಂದ ಕೂಡಿತ್ತೂ.  ಅದನ್ನು ನೋಡಿ ರಾಜ ಮೂಕವಿಸ್ಮಿತನಾಗಿದ್ದ "ಇದು ಕೇವಲ ಶಿಲ್ಪವಲ್ಲ, ಇದು ನಮ್ಮ ಸಂಸ್ಕೃತಿಯ ಶ್ರೇಷ್ಠತೆಯ ಸಂಕೇತ," ಎಂದು ಶಭಾಷ್‌ ಹೇಳಿದ, ಶಿವಣ್ಣನಿಗೆಶಿಲ್ಪ ರತ್ನಎಂಬ ಬಿರುದನ್ನು ನೀಡಿದ.

ಶಿಲ್ಪಗಳು ಇಂದಿಗೂ ಹಂಪೆಯಲ್ಲಿ ಇವೆ, ಪ್ರವಾಸಿಗರು ಅವುಗಳನ್ನ ನೋಡಿದಾಗಲೆಲ್ಲಾ ಬೆರಗಾಗುತ್ತಾರೆ. ಆದರೆ ಬಹುಪಾಲು ಜನರಿಗೆ ಇದು ತಿಳಿದಿಲ್ಲ, ಅದು ಸಾಮಾನ್ಯ ಶಿಲ್ಪಿಯ ಕಷ್ಟದ ಫಲವೆಂಬುದು.

ಕಥೆ ನಮಗೆ ಹೇಳುವ ಪಾಠ:

ಪ್ರತಿಭೆ ಯಾರಲ್ಲಿ ಬೇಕಾದರೂ ಅರಳಬಹುದು. ಪ್ರತಿಭೆಯ ಕಾರ್ಯ ಕಾರಣಗಳು ಇದರ ಮಹತ್ವ, ಮನಸ್ಸಿನ ಶುದ್ಧತೆಯಲ್ಲಿದೆ. ಕರ್ನಾಟಕದ ಇತಿಹಾಸ ಕೇವಲ ರಾಜರು ಅಥವಾ ಯುದ್ಧಗಳ ಕಥೆ ಅಲ್ಲ ಅದು ಸಂಸ್ಕೃತಿ ಸಂಸ್ಕಾರಗಳಲ್ಲಿನ ಕೊಡುಗೆ, ಇಲ್ಲಿನ  ಶಿಲ್ಪಕಲೆಗಳು, ಉತ್ತರ ನಾಗರ ಶೈಲಿ, ದಕ್ಷಿಣದ ದ್ರಾವಿಡ ಶೈಲಿ, ಮತ್ತು ಕನ್ನಡ  ವೈವಿಧ್ಯಮಯದಿಂದ ಕೂಡಿದ ವೇಸರ ಶೈಲಿಯಿಂದಲೂ ಕೂಡಿದೆ. ಕಷ್ಟಪಟ್ಟು ಬೆವರು ಹರಿಸಿದ ಬದುಕಿದ ಶ್ರೀಸಾಮಾನ್ಯರ ಮತ್ತು ಕಾಯಕದ ಮಹತ್ವ ಸಾರುವ ಹಲವು ಹೆಮ್ಮೆಯ ದಾಖಲೆಗಳು ಕೂಡಾ ಕನ್ನಡ ಮಣ್ಣಿನಲ್ಲಿವೆ.

ಈ ಕಥೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಕಾಮೆಂಟ್‌ ಮೂಲಕ ಹಂಚಿಕೊಳ್ಳಿ ಇಂತಹ ಮತ್ತಷ್ಟು ಕಥೆಗಳನ್ನುರಚಿಸಲು ನಮಗೆ ಬೆಂಬಲಿಸಿ ..  

Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...