Skip to main content

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                   

        ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ. ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು, ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ.

ಇಂದಿನ ಬ್ಲಾಗ್ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ಅಲ್ಲಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ. ಬಡವ-ಶ್ರೀಮಂತ ಎಂಬ ಬೇಧವಿಲ್ಲದೇ, ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ, ಸಾವಿರಾರು ಹಬ್ಬ-ಹರಿದಿನಗಳನ್ನ, ನಗೆಯ-ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು.

ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ. ಕಥೆಯ ಮೂಲಕ, ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ, ಆದರೆ ಅವುಗಳ ಹಿಂದೆ ಇರುವ ಜೀವವನ್ನು.


              “ಅನುಭವಗಳ ಅಗ್ರಜಒಬ್ಬ ಪೋಟೋಗ್ರಾಫರ್ ಜೀವನ ಯಾನ”

           ಒಬ್ಬ ಫೋಟೋಗ್ರಾಫರ್ ಜೀವನವನ್ನು ಕೇವಲ ಛಾಯಾಚಿತ್ರಗಳಲ್ಲಿ ಅಳೆಯಲಾಗದು. ಅವನು ಸೆರೆಹಿಡಿಯುವ ಪ್ರತಿಕ್ಷಣಕ್ಕೂ ಒಂದು ಜೀವಂತ ಕಥೆ. ಅವನಿಗೆ ಬಡವನು, ಶ್ರೀಮಂತನು ಎಂಬ ಅಂತರವೇ ಇಲ್ಲಅವನ ಕಣ್ಣಿಗೆ ಎಲ್ಲರೂ ಸಮಾನ, ಆತನೊಳಗೆ ಎಲ್ಲರಲ್ಲೂ ಸುಂದರತೆಯು ಕಂಡುಬರುತ್ತದೆ.

ಹಬ್ಬವಾಗಲಿ, ಮದುವೆಯಾಗಲಿ, ಪುಟ್ಟ ಉಡುಗೊರೆ ಆಗಲಿ ಅಥವಾ ಒಂದು ನಗೆಯ ಕಣ್ತುಂಬುವ  ಕ್ಷಣವಾಗಲಿಅವನು ಅವುಗಳಲ್ಲಿ ಬದುಕನ್ನು ಹುಡುಕುತ್ತಾನೆ. ಅನೇಕ ಊರುಗಳನ್ನು ಸುತ್ತಿ, ಸಾವಿರಾರು ಜನರ ಜೊತೆಗೆ ಒಡನಾಡಿಯಾಗಿ ಬದುಕು ಹಂಚಿಕೊಂಡಿರುವ ಪೋಟೋಗ್ರಾಫರ್, ಪ್ರತೀ ಫ್ರೇಮ್ನಲ್ಲೂ ಒಂದು ಕಥೆಯಿದೆ, ಒಂದು ಆತ್ಮವಿದೆ.

ಅವನ ದೃಷ್ಟಿಯಲ್ಲಿ ಫೋಟೋ ಎಂದರೆ ಚಿತ್ರವಲ್ಲಅದು ಒಂದು ಜೀವಿತ ಕ್ಷಣ. ಬಡವನ ತೊಡೆದ ಮುಗ್ಧ ನಗು, ಶ್ರೀಮಂತನ ಸಂಭ್ರಮದ ಸಂತೋಷ, ಮಂದಹಾಸ ಹೊಳೆ ಎಲ್ಲವೂ ಅವನ ಕ್ಯಾಮೆರಾದೊಳಗೆ ಒಂದೇ ಸಮವಾಗಿ ಹೊಳೆಯುತ್ತವೆ.

ಅವನ ಕೈಯಲ್ಲಿ ಕ್ಯಾಮೆರಾ ಒಂದು ಸಾಧನ ಮಾತ್ರವಲ್ಲ; ಅದು ಮಾನವೀಯತೆಯ ಕನ್ನಡಕ. ಯಾವ ವರ್ಣ, ಜಾತಿ, ವರ್ಗ, ಸ್ಥಿತಿಗತಿಯನ್ನೂ ಲೆಕ್ಕಿಸದೇಎಲ್ಲರ ಜಿವನದ ಚಿತ್ರಣವನ್ನೇ ಸೆರೆ ಹಿಡಿಯುವ ಅದೃಷ್ಟವು ಅವನಿಗೆ ಬಂದಿದೆ.

ಅವರ ಬದುಕು ಕೂಡಾ ಒಂದು ಕಥೆಯಾಗಬಲ್ಲದು, ಅನೇಕ ಕಾರ್ಯಕ್ರಮಗಳಲ್ಲಿ ಮನೆ ಮಕ್ಕಳಾಗಿ ಸುಂದರ ಕ್ಷಣಗಳನ್ನ ಸೆರೆಹಿಡಿದು, ದುಡಿದ ದುಡಿತದ ಫಲವಾಗಿ ಸಿಕ್ಕ ಅನುಭವಗಳು, ಜನತೆಯ ನಂಬಿಕೆ, ಮತ್ತು ಕಲೆಯತ್ತ ಇರುವ ಅವನ ನಿಷ್ಠೆ ಎಲ್ಲವೂ ಸೇರಿ ಅವನನ್ನು ಮಾಡಿವೆ "ಅನುಭವಗಳ ಅಗ್ರಜ".

ಇವನು ಕೇವಲ ಫೋಟೋಗ್ರಾಫರ್ ಅಲ್ಲಇವನು ಜೀವನದ ಚಲನಚಿತ್ರದ ಶಿಲ್ಪಿ.


Popular posts from this blog

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...