Skip to main content

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                              

                ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ

           ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು!

ಇದು ಏಕೆ ಆಗುತ್ತಿದೆ?

ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು:

  • ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ.
  • Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸೇರಿದಾಗ ಹಸುರು ಶಿಲೀಂಧ್ರ ಹೆಚ್ಚಾಗಿ ಬೆಳೆಯುತ್ತವೆ. ಇದರಿಂದ ನದಿ ಹಸಿರು ಕಾಣುತ್ತದೆ, ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ, ಮತ್ತು ಜಲಚರ ಜೀವಿಗಳು ಸಾಯುತ್ತವೆ.
  • ನದಿಯ ನೈಜ್ಯಹರಿವಿಗೆ ಅಡ್ಡಿ – ನದಿಗೆ ಬರಬೇಕಾದ  ನೀರಿನ ಹರಿವುವನ್ನ ಕೆಲ ಪ್ರದೇಶಗಳಲ್ಲಿ ತಡೆಹಿಡಿಯಲಾಗಿದೆ. ಹಾಗಾಗಿ ನಿಂತ ನೀರು ಹೇಗಿರುತ್ತದೋ, ಹಾಗೆ ಪಾಚಿಗಟ್ಟಿ ಕಲುಶೀತಗೊಳ್ಳುತ್ತದೆ.

    * ಯಾರಿಗೆ ತೊಂದರೆ ಆಗುತ್ತಿದೆ?

  • ನಗರ ಮತ್ತು ಗ್ರಾಮೀಣ ಜನರಿಗೆ ಕುಡಿಯುವ ನೀರಿಗೆ ತೊಂದರೆ.
  • ಕೃಷಿಕರ ತೋಟಕ್ಕೆ ಹೋಗುವ ನೀರಿನ ಗುಣಮಟ್ಟ ಕುಸಿತ.
  • ಜೀವರಾಶಿಗೆಗಳಿಗೆ ಮತ್ತು ಮೀನುಗಾರರ ಜೀವನಕ್ಕೆ ಹೊಡೆತ.
  • ಶಾಲಾ ಮಕ್ಕಳ ಭಾವನೆಯಲ್ಲಿ – “ನದಿ ನೀರು ನಮ್ಮದು ಇದು ಆರೋಗ್ಯಕರ  ಅಂತ ಅನ್ನಿಸೊದಿಲ್ಲ”ಪ್ರಕೃತಿ ಮೇಲೆ ನಂಬಿಕೆ ಕಳೆದುಹೋಗುತ್ತದೆ.        

   *ನಾವು ಏನು ಮಾಡಬೇಕು?

  • ಸ್ಥಳೀಯ ಪಂಚಾಯಿತ್/ನಗರಸಭೆ ಸಹಯೋಗದಲ್ಲಿ ಈ ವಿಚಾರವನ್ನ ಗಂಭಿರವಾಗಿ ತೆಗೆದುಕೊಳ್ಳಬೇಕಿದೆ.(ನೀರು ಪರೀಕ್ಷೆ, ನಿರ್ವಹಣೆ).
  • ಜಾಗೃತಿ ಅಭಿಯಾನ – ಫೋಟೋಗ್ರಾಫರ್‌ಗಳು ಮತ್ತು ಯುವಕರು ಚಿತ್ರಗಳ ಮೂಲಕ ಜನರಿಗೆ ತೋರಿಸಬೇಕು.
  • ಕಸ ಬಿಸಾಕುವಾಗ ಜವಾಬ್ದಾರಿ – ಮನೆಮಾಲೀಕರು, ವ್ಯಾಪಾರಸ್ಥರು, ಎಲ್ಲರೂ ಬದಲಾಗಬೇಕು.

*ಕೊನೆಗೆ – ನಾವು ನದಿಗೆ ಏನು ಕೊಟ್ಟಿದ್ದೇವೆ? 

     ತುಂಬಾ ಬಾರಿ ನಾವು ನದಿಯಿಂದ ಎಲ್ಲವನ್ನೂ ಕೇಳಿದ್ದೇವೆ, ನಿತ್ಯಜೀವನದಲ್ಲಿ ಪೂಜ್ಯಭಾವನೆಯಲ್ಲಿ ಕಾಣುತ್ತೇವೆ. ಅದಾಗ್ಯೂ ಇಂದು ನದಿಯ ಮೈಮೇಲಿನ ಹಸಿರು ಕಪ್ಪಾಗಬಾರದು ಅಂತ ಹೋರಾಡೋ ಕಾಲ ಬಂದಿದೆ.
       ಹಾಲಿನ ನೊರೆಯಲ್ಲಿ ಹೊಳೆಯೋ ನದಿಯ ಬದಲು, ನಿಶ್ಯಬ್ದವಾಗಿ ನಿಂತ ಕಲುಶಿತ ನದಿಯ ನೋಡೊ ಕಾಲ ಬರಬಾರದು– ಎಲ್ಲಾದು ಮಾನವ ಸಮಾಜದ ಆಯ್ಕೆಯ ಮೇಲೆ ಅವಲಂಬಿತವಾಗಿದೆ.

       ನದಿ ಉಳಿಸೋಣ, ನದಿ ನಮ್ಮ ಜೀವಾಳ, ನದಿಯ ಪರಿಸರ ಉಳಿಸೋದು ನಮ್ಮ ಹೊಣೆ. ಇದಕ್ಕಾಗಿ ಪ್ರತಿಯೊಬ್ಬರೂ ಜಾಗೃತರಾಗಬೇಕು.

ಲೇಖಕ: ಶಿವಲಿಂಗಯ್ಯ ಕುಲಕರ್ಣಿ
Kavya Digital’s Studio – ಗಂಗಾವತಿ

Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...