Skip to main content

ಬದಾಮಿ ಚಾಲುಕ್ಯರ ಇತಿಹಾಸ

 


                                  ಬದಾಮಿ ಚಾಲುಕ್ಯರು ಯಾರು?

ಕರ್ನಾಟಕ ಇತಿಹಾಸದಲ್ಲಿ ಕದಂಬರಿಂದ ಸಾಮ್ರಾಜ್ಯ ವಶಪಡಿಸಿಕೊಂಡ ಬದಾಮಿ ಚಾಲುಕ್ಯರು, ದಕ್ಷಿಣ ಭಾರತದಲ್ಲಿ ಆಡಳಿತ ನಡೆಸಿದ ಪ್ರಮುಖ ರಾಜವಂಶಗಳಲ್ಲಿ ಈ ವಂಶವು ಕೂಡಾ ಒಂದು. ಇವರು ಕ್ರಿ.. 6ನೇ ಶತಮಾನದ ಮಧ್ಯಭಾಗದಿಂದ 8ನೇ ಶತಮಾನದವರೆಗೂ ಆಡಳಿತ ನಡೆಸಿದರು. ಇವರ ರಾಜಧಾನಿ ಬದಾಮಿ (ಪ್ರಾಚೀನವಾದಿ ಬದಾಮಿ) ಇತ್ತು, ಇದು ಇಂದಿನ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯಲ್ಲಿ ಕಂಡುಬರುತ್ತದೆ.

ವಂಶದ ಮೂಲ ಪುರುಷ ಜಯಸಿಂಹ ಇತನು ಕ್ರಿ.ಶ 500 ರಲ್ಲಿ ಐಹೋಳೆಯಲ್ಲಿ ಆಡಳಿತ ನಡೆಸುತ್ತಿದ್ದನು. ನಂತರದಲ್ಲಿ ಇತನ ಮೊಮ್ಮಗ ಬದಾಮಿಯಲ್ಲಿಪುಲಕೆಶಿ–1.

ಇತನು ಕ್ರಿ.ಶ 540ರಲ್ಲಿ ತನ್ನಾಆಡಳಿತ ಕೇಂದ್ರವನ್ನ ಐಹೋಳೆಯಿಂದ ಬದಾಮಿಗೆ ಬದಲಾಯಿಸಿ ಗಿರಿದುರ್ಗಾ ಎನ್ನುವ ಕೊಟೆಯನ್ನ ಕಟ್ಟಿಸಿ ಆಡಳಿತ ನಡೆಸುತ್ತಾನೆ ಮತ್ತು ಬಲಿಷ್ಠರಾಗಿದ್ದ ಬನವಾಸಿ ಕದಂಬರನ್ನ ಸಂಪೂರ್ಣವಾಗಿ ಸೋಲಿಸಿ ಸ್ವತಂತ್ರ ಸಾಮ್ರಾಜ್ಯ ಕಟ್ಟುತ್ತಾನೆ. ಹಾಗಾಗಿ ಇತನನ್ನ ಬದಾಮಿ ಚಾಲುಕ್ಯರ ಸ್ಥಾಪಕ ಎಂದು ಕರೆಯಲಾಗಿದೆ ಈ ವಂಶದ ಪ್ರಸಿದ್ದ ದೊರೆ ಪುಲಕೆಶಿ–II.

  ಪುಲಕೆಶಿ–1 ಗೆ ಇಬ್ಬರು ಮಕ್ಕಳು ಕಿರ್ತಿವರ್ಮ ಪ್ರಥಮ ಮಗ ಎನೇ ಮಗ ಮಂಗಳೇಶ ಕಿರ್ತಿವರ್ಮನ ಮಕ್ಕಳೇ ಪುಲಕೆಶಿ–II.(ಎರೆಯ) ಮತ್ತು ಕುಬ್ಜ ವಿಷ್ಣುವರ್ಧನ.

                                       ಪುಲಕೆಶಿ II ಸಾಧನೆಗಳು ಯಾವುವು?

  • ಪುಲಕೆಶಿ II (ಕ್ರಿ.ಶ 610–642) ಬದಾಮಿ ಚಾಲುಕ್ಯರ ಪ್ರಸಿದ್ಧ ಮತ್ತು ಶಕ್ತಿಶಾಲಿ ರಾಜನು.
  • ಗಂಗಾ, ಕದಂಬ, ಪಲ್ಲವ, ಕಾಶ್ಮಿರ, ಅರಬ್ಬರು ಮುಂತಾದ ರಾಜವಂಶಗಳನ್ನು ಸೋಲಿಸಿದ.
  • ಹರ್ಷವರ್ಧನನ ದಕ್ಷಿಣ ಭಾರತ ಪ್ರವೇಶವನ್ನೇ ತಡೆದವನಾಗಿ ಪ್ರಸಿದ್ಧಪಡೆದ.
  • ಪ್ರಾರಂಭದಲ್ಲಿ ಬಹುಶ್ರೇಷ್ಠನಾಗಿ ಆಡಳಿತ ನಡೆಸಿದ ಇತನನ್ನ, ಪಲ್ಲವರ ರಾಜ ನರಸಿಂಹವರ್ಮನ್-I ಸೋಲಿಸಿದ.

 ಚಾಲುಕ್ಯರ ಆಡಳಿತ ವ್ಯವಸ್ಥೆ ಹೇಗಿತ್ತು?

  • ಆಡಳಿತ ವ್ಯವಸ್ಥೆ ಶಕ್ತಿಶಾಲಿಗಿತ್ತು ಮತ್ತು ಬದಾಮಿ ಕೇಂದ್ರೀಕೃತವಾಗಿತ್ತು.
  • ರಾಜನು ಪರಮಾಧಿಕಾರಿ, ಆದರೆ ಸ್ಥಳೀಯ ಆಡಳಿತಕ್ಕೂ ಮಹತ್ವ ನೀಡಿದ್ದರು.
  • ಗ್ರಾಮ ಪಂಚಾಯತ್ ಅಥವಾ **"ಮಹಾಜನಸಭೆ"**ಗಳು ಇದ್ದವು.
  • ಪ್ರಜಾಪ್ರತಿನಿಧಿತ್ವ ಮತ್ತು ಧರ್ಮ ಸಹಿಷ್ಣುತೆ ಇದ್ದಿತು.

 

 ಬದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಸಂಸ್ಕೃತಿ ಹೇಗಿತ್ತು?

  • ಇವರು ವೇಸರ ಶೈಲಿ ಎಂದು ಕರೆಯುವ ಶಿಲ್ಪಕಲೆನ್ನ ಉತ್ತಮ ರೀತಿಯಲ್ಲಿ ಪೊಷಿಸಿದರು.
  • ಬದಾಮಿ ಗುಹೆಗಳು (ಹಿಂದೂ, ಜೈನ ಮತ್ತು ಬೌದ್ಧ ಗುಹೆಗಳು) ವಾಸ್ತುಶಿಲ್ಪಗಳಿಗೆ ಅತ್ಯುತ್ತಮ ಉದಾಹರಣೆಗಳಾಗಿದೆ.  
  • ಐಹೋಳೆ ಮತ್ತು ಪಟ್ಟದಕಲ್ಲು ಊರುಗಳಲ್ಲಿ ಹಳೆಯ ದ್ರಾವಿಡ ಶೈಲಿಯ ದೇವಸ್ಥಾನಗಳು ಇವೆ.
  • "ಐಹೋಳೆಶಿಲ್ಪಕಲೆಯ ಪಾಲಿಗೆ ಪ್ರಯೋಗಾಲಯ" ಎಂದು ಕರೆಯಲಾಗುತ್ತದೆ.
  • ಐಹೋಳೆ ,ಪಟ್ಟದಕಲ್ಲು ಯೂನೆಸ್ಕೋ ವಿಶ್ವಪಾರಂಪರಿಕ ತಾಣಗಳಾಗಿವೆ.

        ವಂಶದ ಅಂತ್ಯ ಹೇಗೆ ಆಯಿತು?

  • ಸುಮಾರು ಕ್ರಿ.ಶ 753 ರಲ್ಲಿ, ರಾಷ್ಟ್ರಕೂಟರು ಬದಾಮಿ ಚಾಲುಕ್ಯರನ್ನು ಸೋಲಿಸಿದರು.
  • ಇವರು ರಾಜಕೀಯವಾಗಿ ಕುಸಿತಕ್ಕಿಳಿದರು.
  • ಆದರೆ ಇಂದಿನ ಕಲ್ಯಾಣಿ ಚಾಲುಕ್ಯರು ಎಂಬ ಹೆಸರಿನಲ್ಲಿ ಮತ್ತೊಂದು ಶಾಖೆ 10ನೇ ಶತಮಾನದ ನಂತರ ಮತ್ತೆ ಆಡಳಿತಕ್ಕೆ ಬಂದರು.

      ಬದಾಮಿ ಚಾಲುಕ್ಯರ ಪ್ರಮುಖ ದೇವಾಲಯಗಳು ಯಾವುವು?

  • ಲದ್ಖಾನ್ ದೇವಸ್ಥಾನಐಹೋಳೆ
  • ದೂರ್ಗಾ ದೇವಸ್ಥಾನಐಹೋಳೆ
  • ಮಲ್ಲಿಕಾರ್ಜುನ ಮತ್ತು ವಿರುಪಾಕ್ಷ ದೇವಸ್ಥಾನಪಟ್ಟದಕಲ್ಲು
  • ಗುಹಾಂತರ ದೇವಸ್ಥಾನಗಳುಬದಾಮಿ

     ಬದಾಮಿ ಚಾಲುಕ್ಯರ ಭೌಗೋಳಿಕ ವ್ಯಾಪ್ತಿ ಎಷ್ಟು?

  • ಇವರು ತನ್ನ ಶ್ರೇಷ್ಠ ಸಮಯದಲ್ಲಿ ಇಂದಿನ ಕರ್ನಾಟಕದ ಬಹುಪಾಲು, ಅಂಧ್ರಪ್ರದೇಶ, ಮಹಾರಾಷ್ಟ್ರದ ಭಾಗಗಳು, ಗುಜರಾತ್‌ ಮಧ್ಯಪ್ರದೇಶದ ಹಾಗೂ ತಮಿಳುನಾಡಿನ ಕೆಲವು ಭಾಗಗಳು ಮೇಲೆ ಸಾಮ್ರಾಜ್ಯಹಕ್ಕು ಹೊಂದಿದ್ದರು.

Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...