Skip to main content

ಟೆಕ್ನಾಲಜಿಯ ಜಗತ್ತಿನಲ್ಲಿ ನೆಮ್ಮದಿ ಶಾಂತಿ ಹುಡುಕುವದು ಹೇಗೆ ? "ಆತ್ಮವಿಶ್ವಾಸವೇ ಶಕ್ತಿ: ಹೊಸ ಯುಗದ ಬದುಕಿನ ಮಂತ್ರ”



ನಮಸ್ಕಾರ ಸ್ನೇಹಿತರೇ 

ಒಂದು ಕಾಲವಿತ್ತು ಮುಂಜಾನೆ ಎದ್ದ ತಕ್ಷಣ ತಣ್ಣನೆಯ  ಚಳಿಯ ಗಾಳಿಯಲ್ಲಿ ಸೂರ್ಯೋದಯದ ಸಮಯದಲ್ಲಿ ತೆಳ್ಳನೆಯ ಸೂರ್ಯರಶ್ಮಿಯನ್ನ ನೋಡುವುದೆ ಒಂದು ಚಂದವಾಗಿತ್ತು. ಆ ಸಮಯದಲ್ಲಿ ಸೂರ್ಯನನ್ನ ದೃಷ್ಠಿಸಿ ನೋಡಿದರು ಕೂಡಾ ಕಣ್ಣಿನ ಆರೊಗ್ಯ ಚೆನ್ನಾಗಿರುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು.  ಅದರಂತೆ ಬೆಟ್ಟದಾಚೆ ಚಿಮ್ಮುವ ಸೂರ್ಯ, ತೆಳ್ಳಗೆ ಬೀಳುವ ಬೆಳಕು, ಹಕ್ಕಿಗಳ ಕೂಗಿನ ಮಾತುಗಳು  ಈ ಎಲ್ಲವು ನಮ್ಮ ಮನಸ್ಸಿಗೆ ನಿಶಬ್ದದ ಜೋತೆಗೆ ನೆಮ್ಮದಿಯ ಜ್ಞಾನವನ್ನು ಕೊಡುತ್ತಿದವು

ಆದರೆ ಇಂದು, ಬೆಳಿಗ್ಗೆ ಎದ್ದು ನಮ್ಮ ಕಣ್ಣು ತೆಗೆಯುವ ಸಂದರ್ಭದಲ್ಲಿ ನಮಗೆ ಮೊಬೈಲ್ ನೋಟಿಫಿಕೇಶನ್  ಶಬ್ದ ಮತ್ತು ಇದರ ಬೆಳಕು ನಮ್ಮ ಕಣ್ಣಿಗೆ ಬಿಳುತ್ತಿವೆ..

ಟೆಕ್ನಾಲಜಿಯ ತ್ವರಿತ ಜಗತ್ತಿನಲ್ಲಿ ನಾವು ನೆಮ್ಮದಿಯ ಜ್ಞಾನವೇನು ಎಂಬುದನ್ನು ಮರೆತಂತೆಯೇ ಆಗಿದೆ. ನಾವು ಇಂದು ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಾ, ಓದುತ್ತಾ ಇರೋಣ; ಆದರೆ ಅದರಲ್ಲಿಂದು ನಮಗೆ ಎಷ್ಟು ಶಾಂತಿ ಉಳಿದಿದೆ?

ಇಂದು, ಆತ್ಮವಿಶ್ವಾಸ ಮತ್ತು ಶಾಂತಿಯಿಂದ ಬದುಕಬೇಕೆಂದರೆ, ಮೊದಲಿಗೆ ನಾವು ತಿಳಿದುಕೊಳ್ಳೊದು  ತಂತ್ರಜ್ಞಾನದಿಂದ ಬದುಕಲ್ಲ ಬದುಕಲಿಕ್ಕಾಗಿ ತಂತ್ರಜ್ಞಾನ ಎನ್ನುವದನ್ನ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಇಲ್ಲಿ ತಂತ್ರಜ್ಞಾನವು ಬೇಕು ಅದಕ್ಕಿಂತ ಮಿಗಿಲಾಗಿ ಜೀವನವು ಬೇಕು ಎನ್ನುವಂತಹ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಕಾರಣ ನಾವು ಇದರ ಮಧ್ಯದಲ್ಲಿ ನೆಮ್ಮದಿಯ ಸಂಪರ್ಕ ಸಾಧಿಸಲೇಬೇಕು. ಫೋನ್‌ನ ಶಬ್ದಕ್ಕಿಂತ ಹೆಚ್ಚು ಹೆಚ್ಚು ಮನಸ್ಸಿನ ಶಬ್ದ ಕೇಳಿಸಿಕೊಳ್ಳಲೇಬೇಕು. ಪ್ರತಿದಿನದ ಕೆಲ ಕ್ಷಣಗಳನ್ನು ನಾವು “ ನೆಮ್ಮದಿಯ ಜ್ಞಾನಕ್ಕಾಗಿ” ಮೀಸಲಿಡಬೇಕು ಆದರೆ ಅದು ಫೋನಿಗಾಗಿ ಅಲ್ಲ, ಮನಸ್ಸಿಗಾಗಿ.

ನೆಮ್ಮದಿಯ ಜ್ಞಾನದಿಂದ ಶಾಂತಿ ಅಂದ್ರೆ — ಎಲ್ಲವನ್ನೂ ತಿಳಿದವನು ಅಲ್ಲ; ಆದರೆ ಯಾವ ಸಮಯದಲ್ಲಿ ಯಾವ ಮಾಹಿತಿ ತನ್ನ ಮನಸ್ಸಿಗೆ ಒಳ್ಳೆಯದು ಎಂಬುದನ್ನು ಪರಿಪಕ್ವವಾಗಿ ಅರಿತು ತಿಳಿದವನು. ತಂತ್ರಜ್ಞಾನ ಇದು ನವೀನ ಜಗತ್ತಿನಲ್ಲಿ ಒಂದು ಹೊಸ ಶಕ್ತಿಯಂತೆ ಬೆಳೆಯುತ್ತದೆ.ನಾವು ತಂತ್ರಜ್ಞಾನ ಬಳಸಬೇಕು, ಆದರೆ ಅದು ನಮ್ಮನ್ನು ಬಳಸಬಾರದು.ನಾವು ಕಲಿಯಬೇಕು ನಿಜ, ಆದರೆ ಕಲಿಯುವುದೇ ಗೊಂದಲವಾಗಬಾರದು; ನಾವು ಸರಳವಾಗಿ ತಿಳಿದು ಆಳವಾದ ಅರಿವು ಮೂಡಿಸಿಕೊಳ್ಳಬೇಕು. ಮನಸ್ಸಿನ ಚಿಂತನೆಗೆ ಹೆಚ್ಚು ಮಹತ್ವ ಕೊಡಬೇಕು. 

ನಾವು ತಂತ್ರಜ್ಞಾನದ ಸಂಪರ್ಕದಲ್ಲಿರಬೇಕು, ಆದರೆ ಅದಕ್ಕೆ ಮೊದಲು  ನಮ್ಮ‌ನ್ನ ನಾವು ಸ್ವಯಂ ಸಂಪರ್ಕದಲ್ಲಿ  ಇರಿಸಿಕೊಳ್ಳಬೇಕು.

ಮನಸ್ಸು ನೆಮ್ಮದಿಯಿಂದ ಇದ್ದರೆ, ಆತ್ಮವಿಶ್ವಾಸವು ತನ್ನ ದಾರಿ ಹುಡುಕುತ್ತದೆ. ಇಡೀ ಜಗತ್ತು ಹೆಚ್ಚು ಶಬ್ದಮಯವಾಗಿದ್ರೆ, ನಾವು ನಮಗಾಗಿಯೇ ಮನಸ್ಸಿನಲ್ಲಿ ಒಂದು ಶಾಂತ ಕೋಣೆಯನ್ನು ನಿರ್ಮಿಸಿಕೊಳ್ಳಬೇಕು  ಅಲ್ಲಿ ಯಾವುದೂ ಯಾರು ನಮ್ಮನ್ನ ಆಜ್ಞಾಪಿಸಲ್ಲ, ಇಲ್ಲಿ ನಮ್ಮನ್ನು ನಾವೆ ಮನನ ಮಾಡಿಕೊಳ್ಳಬೇಕು

ಅದೇ ನೆಮ್ಮದಿ ಅಲ್ಲಿಯೇ ನಿಜವಾದ "ಜ್ಞಾನದ ಶಾಂತಿ".

ಆ ಶಾಂತಿಯನ್ನ ನಾವು ತಲುಪಿದಾಗ, ಈ ತಂತ್ರಜ್ಞಾನ ನಮಗೆ ತಿರುಗುಬಾಣವಾಗಲ್ಲ; ನಮ್ಮ ಕನಸುಗಳ ಸೇತುಬಂಧ ಆಗುತ್ತದೆ.

ಈ ವಿಷಯ ಇಷ್ಟವಾದರೆ ನಿಮ್ಮ ಸ್ನೇಹಿತ ಸಮೂಹ ವರ್ಗದ ಜೋತೆ ಹಂಚಿಕೊಳ್ಳಿ....


ಧನ್ಯವಾದಗಳು 🙏



Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...