Skip to main content

ಓಳ್ಳೇಯ ಭಾವನೆ ಇದ್ದಲ್ಲಿ ಯಾವ ಸ್ನೇಹ ಸಂಬಂಧದಲ್ಲಿ ತೊಂದರೆ ಬರುವದಿಲ್ಲ.

 🌿 ಅವರಿಗೂ ಒಳ್ಳೆಯದು ಆಗಲಿ… ನಮ್ಮಿಗೂ ಒಳ್ಳೆಯ ಸ್ನೇಹ ಸಿಗಲಿ 🌿

– ಲೇಖನ: ಶಿವಲಿಂಗಯ್ಯ ಕುಲಕರ್ಣಿ, ಕಾವ್ಯ ಡಿಜಿಟಲ್ಸ್ ಗಂಗಾವತಿ


ಒಬ್ಬರನ್ನು ನಾವೆಷ್ಟು ಪ್ರೀತಿಸುತ್ತೇವೆ… ಅವರು ನಮ್ಮ ಬದುಕಿನ ಭಾಗವಾಗಿರುವಾಗಿ ಉಳಿಯುತ್ತಾರಾ ಕಂಡಿತ ಇಲ್ಲ, ನಮ್ಮ ಹೃದಯದಲ್ಲಿ ಮಾತ್ರ  ಶ್ರೇದ್ಧಾಪೂರ್ವಕವಾಗಿ ಉಳಿಯುತ್ತಾರೆ...

ನಾವು ಬಯಸೋದು ಅವರು ಸದಾ ಸಂತೋಷವಾಗಿರಲಿ, ಆರೋಗ್ಯವಾಗಿರಲಿ, ಅವರ ಜೀವನ ಚೆನ್ನಾಗಿ ಬೆಳೆಯಲಿ ಎನ್ನುವದಷ್ಟೆ .

ನಾವು ಮಾತನಾಡಬೇಕು, ಖುಷಿ ವಿಚಾರ ಹಂಚಿಕೊಳ್ಳಬೇಕು, ಅವರ ಬಗ್ಗೆ ನಾವು  ಶ್ರದ್ಧೆ ಈಟ್ಟಿದ್ದೇವೆ ಎಂದು ತಿಳಿದು ಅವರ ಜೀವನವು ಕೂಡಾ ಬದಲಾಗಬಹುದು ಎಂದು ಹಲವಾರು ಬಾರಿ ಪ್ರಯತ್ನಿಸುತ್ತೇವೆ.

ಆದರೆ ಕೆಲವೊಮ್ಮೆ... ಈ ಒಳ್ಳೆಯ ಭಾವನೆ ಅಪಾರ್ಥಗಳಾಗುತ್ತದೆ.

ಮನದ ಮಾತು ತಿಳಿಯದ misunderstandingಗಳು ಉಂಟಾಗುತ್ತವೆ.

ಅವರು ದೂರವಾದರೂ, ನಾವು ಒಳಗೊಳಗೇ ಹೃದಯದಿಂದ ಅವರಿಗೆ ಒಳ್ಳೆಯದನ್ನು ಬಯಸುತ್ತೇವೆ.

ಅವರಿಗೆ ನಾವು ಏನು ಮಾಡುವದು ಕೂಡಾ ಬೇಡವಾದರು ನಾವು ತೋರಿಸುವ ಕಾಳಜಿ, ಪ್ರೀತಿಯಿಂದಲೂ ಕೂಡಾ ಅವರ ಜೀವನ ಬದಲಾಗಬಹುದು, ಅವರ ಪ್ರತಿಕ್ರಿಯೆ ಕಮ್ಮಿಯಾಗಬಹುದು.

ಆದರೂ… ನಾವು ಬದಲಾಗಲ್ಲ ಏಕೆಂದರೆ ಅವರ ಸಂತೋಷವೇ ಕೆಲವು ಬಾರಿ ನಮಗೆ ಮುಖ್ಯವಾಗುತ್ತದೆ.

ಏಕೆಂದರೆ ಅದು ಸ್ವಾರ್ಥದ ಪ್ರೀತಿ ಸ್ನೇಹ  ಅಲ್ಲ. ಅದು ಪ್ರಾರ್ಥನೆಯ ಭಾವನಾತ್ಮಕ ಭಾಂಧವ್ಯ.

ನಿಜವಾದ ಸ್ನೇಹ,ಪ್ರೀತಿ ಭಾಂದವ್ಯ ಸತ್ಯವಾದರೆ ಅದು ಅಂತರಾತ್ಮಕ್ಕೆ ಜಾಗೃತಗೊಳಿಸುತ್ತಲೇ ಇರುತ್ತವೆ, ಅದನ್ನ ಅನಾವಶ್ಯಕ ತಪ್ಪುಕಲ್ಪನೆಗಳೊಂದಿಗೆ ಹೋಲಿಕೆ ಮಾಡಬಾರದು.

ಒಂದು ನಿಷ್ಕಲ್ಮಷ ಪ್ರೀತಿಯ ಸ್ನೇಹ ಭಾಂದವ್ಯ ಅನೇಕ ಅದ್ಬುತ ಸೃಜಲನಾತ್ಮಕ ವಿಚಾರಗಳನ್ನ ಸೃಷ್ಟಿಸಬಹುದು ಅನೇಕ ಬದಲಾವಣೆಗಳನ್ನು ಕೂಡಾ ತರಬಹುದು.


🌸

"ಅವರು ನಮ್ಮ ಬದುಕಿನಲ್ಲಿ ಇರಲಿ-ಇರದಿರಲಿ, ಅವರಿಗೂ ಒಳ್ಳೆಯದು ಆಗಲಿ.

ನಮ್ಮ ಬದುಕಿಗೂ ಉತ್ತಮ ಸ್ನೇಹಿತರು ಸಿಗಲಿ, ಶುದ್ಧ ಹೃದಯದವರು ಸಿಗಲಿ.

ಯಾರು ಹತ್ತಿರದಲ್ಲಿದ್ದರೂ, ದೂರದಲ್ಲಿದ್ದರೂ…

ಸ್ನೇಹ ಎಂದರೆ ಮನಸ್ಸಿನಲ್ಲಿ ನೆಲೆಸಿದ ಬೆಳಕು ಮಾತ್ರ ಅದು ಸದಾ ಹೃದಯಸ್ಪರ್ಶಿಯಾಗಿರುತ್ತದೆ .🌸


Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...