Skip to main content

"ಮಾತಿಲ್ಲದ ಮಗ ಸಂಗೀತಗಾರನಾದ" – ತಾಯಿಗೆ ಕೇಳಿಸೋ ಮನದ ಮಾತು .

                        

         ಮಳೆ ಬರುತಿತ್ತುಆಕಾಶದಿಂದ ಬೀಳುವ ತಂಪಾದ ಮಳೆಹನಿ ,ಮತ್ತೊಂದು ಕಡೆ ಮಳೆಹನಿ ಭೂಮಿಗೆ ಬಿದ್ದ ತಕ್ಷಣ ಭೂಮಿಯಿಂದ ಸಂಪಾದ ಸುಮುಧುರ ಗಾಳಿ ಮನಸ್ಸಿಗೆ ಸ್ಪರ್ಶಿಸುತ್ತಿತ್ತು, ಆದರೆ ಮನೆಯೊಳಗೆ – ಎಂದಿನಂತೆ ಒಂದು ತಾಯಿಯ ಹೃದಯ ನಿತ್ಯ ಮಗನ ಸ್ಪೂರ್ತಿದಾಯಕ ಸಂಗೀತ ಆಲಿಸುತ್ತಿದ್ದಳು. ಆಕೆಗೆ ಮಗನ ಸಂತೋಷವೇ ಮುಖ್ಯವಾಗಿತ್ತು. ಮಗನಿಗೆ ಹುಟ್ಟಿನಿಂದ ಮಾತು ಬರುತ್ತಿರಲಿಲ್ಲ ಸಂಗೀತವೇ ಅವನ ಪ್ರಪಂಚವಾಗಿತ್ತು.

         ಒಂದು ಸಂಜೆತಾಯಿ ಏಕಾಂತದಲ್ಲಿ ಹಾಳಾದ ಹಾರ್ಮೋನಿಯಮ್ ಕೈಗೆ ತಗೊಂಡು, ದೇವರಿಗೆ ಮೊರೆ ಇಡುತ್ತಿದ್ದಳು. ಆಗ ಮಗು ಮೌನವಾಗಿ ಎದುರಿಗೆ ಬಂದು ಹಾರ್ಮೋನಿಯಮ್ ಮುಟ್ಟಿದ ತಾಯಿಯ ಕಣ್ಣಿಗೆ ದೃಶ್ಯ ಅರ್ಥವಾಗಲಿಲ್ಲ. ಆದರೆ ಮೊದಲ ತಾಳ – ಮೊದಲ ಸ್ಪಂದನೆ – ಮೊದಲ ನಾದ! ತಾಯಿಗೆ ಅವನ ಮೌನವೂ ಹಾಡಾಗಿ ಕೇಳಿಸಿತು. ಆ ಕ್ಷಣದಿಂದ ಪ್ರತಿ ಸಂಜೆ, ಮಗನ ಸಂಗೀತವೇ ತಾಯಿಗೆ ಪವಿತ್ರವಾಯಿತು. ತಾಳದಲ್ಲಿ ಮಾತು, ನಾದದಲ್ಲಿ ಸ್ಪಂದನೆ, ಮೌನದಲ್ಲಿ ಕಥೆ.

         ಅವನಿಗೆ ಸಾಮಾಜಿಕ ಜಾಲ ತಾಣ ಗೊತ್ತಿರಲಿಲ್ಲ, ಆಂಗ್ಲದಲ್ಲಿ ಬರೆಯಲಿಕ್ಕೆ ಸಾಧ್ಯವಿರಲಿಲ್ಲ. ಆದರೆ ದಿನ ಸ್ನೇಹಿತರಿಂದ ತಿಳಿದುಕೊಂಡು –  ಅವನು ತನ್ನ ನಿನ್ನೆಯ ಸಂಗೀತವನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದ, ಅದು ಬೇರೆ ಯಾರಿಗೋ ಮಧುರ ಸೌಂದರ್ಯ, ಆದರೆ ತಾಯಿಗೆ – ತನ್ನ ಮಗನ ಪ್ರೇಮ ಪತ್ರ.  
                          
        ಹತ್ತು ತಿಂಗಳ ನಂತರ ಅವನ ಮೊಬೈಲ್ ಸ್ಕ್ರೀನ್ ಮಿಂಚಿತು: 📩 “Your music has reached 2 million hearts. $5,000 credited to your account.” ಇದನ್ನ ತಾಯಿ ನೋಡಿದಳು, ತಾಯಿ ಕಣ್ಣು ನೀರಾಯಿತು, ಅವನು ತಾಯಿ ಎದುರು ನಿಂತು ಆತ್ಮವಿಶ್ವಾಸದಿಂದ ಮುಗುಳ್ನಗುತ್ತಿದ್ದ, ಅಮ್ಮ ಅವನ ಕೈ ಹಿಡಿದು ಹೇಳಿದಳು: “ಮಗು ನೀನು ಮಾತನಾಡುವುದಿಲ್ಲ ನಿಜ, ಆದರೆ ನಿನ್ನ ಸಂಗೀತದ ರಾಗವಂತು ಎಷ್ಟು ಜನರ ಮನಸ್ಸನ್ನ ಮಾತಾಡಿಸಿದೆ.

          ಒಬ್ಬ ಮಗನ ಮನಸಿನ ಕನಸು ತಾಯಿಗೆ ಅರ್ಥವಾಗಿತ್ತು, ಅವನ ಮೌನಕ್ಕೆ ತಾಯಿಯ ಪ್ರೇಮ ಸ್ಪಂದಿಸಿತ್ತು. ಇವೆರಡರ ನಡುವೆಹಾರ್ಮೊನಿಯಂ, ತಾಳ, ನಾದ ಇದೆಲ್ಲ ಮಗುವಿನ ಮೌನದ ಭಾವನೆಗಳಿಗೆ ಸೃಜನಶೀಲತೆಯ ಕಾವ್ಯವಾಯಿತು.

            ಪಾಠಮೌನವೂ ಮಾತನಾಡುತ್ತದೆ

  ಸತ್ಯ ಪ್ರೀತಿ, ಶ್ರದ್ಧೆ ಮತ್ತು ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದು ಶಕ್ತಿ ಇರುತ್ತದೆ, ನಮ್ಮ ಜೀವನದಲ್ಲಿ ನ್ಯೂನ್ಯತೆಗಳಿದ್ದರು,  ಆತ್ಮದ ಶಕ್ತಿ ಮಹತ್ತರವಾದದು.


Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...