Skip to main content

ತಂತ್ರಜ್ಞಾನ ಯುಗದಲ್ಲಿ AI ನ ಪಾತ್ರ

                       

             ಇತ್ತೀಚಿನ ದಶಕಗಳಲ್ಲಿ ತಂತ್ರಜ್ಞಾನದಲ್ಲಿ ಸಂಭವಿಸಿದ ಕ್ರಾಂತಿಕಾರಿ ಬದಲಾವಣೆಗಳು ನಮ್ಮ ಬದುಕಿನ ಪ್ರತಿಯೊಂದು ಕ್ಷೇತ್ರಕ್ಕೂ ತಲುಪಿವೆ. ಈ ಕ್ರಾಂತಿಯ ಹೃದಯಸ್ಥಾನದಲ್ಲಿ ಇರುವ ಇರುವಿಷಯವೇ  – ಕೃತಕ ಬುದ್ಧಿಮತ್ತೆ (Artificial Intelligence). ಇನ್ನೂ ಈ Artificial Intelligence ಯಾವ ಯಾವ ಕ್ಷೇತ್ರನ್ನ ವ್ಯಾಪಿಸಿದೆ ಎಂದು ನೋಡುವುದಾದರೆ.

1. ಶಿಕ್ಷಣ ಕ್ಷೇತ್ರದಲ್ಲಿ AI: AI ಆಧಾರಿತ ಟ್ಯೂಟೋರಿಂಗ್ ಸಿಸ್ಟಮ್ ವಿದ್ಯಾರ್ಥಿಗಳ ಕಲಿಕೆ ಶೈಲಿಗೆ ತಕ್ಕಂತೆ ಪಾಠಗಳನ್ನು ರೂಪಿಸುತ್ತಿವೆ. ಪ್ರತ್ಯೇಕ ಅಧ್ಯಯನ ಮಾರ್ಗದರ್ಶನ, ತ್ವರಿತ ಉತ್ತರ ವ್ಯವಸ್ಥೆ, ಹಾಗೂ ಪಠ್ಯವಸ್ತು ವಿಶ್ಲೇಷಣೆಯಲ್ಲಿ AI ಮಹತ್ತರವಾಗಿದೆ.

2. ಕೃಷಿ ಕ್ಷೇತ್ರದಲ್ಲಿ: ನೀರೆರವು, ಮಣ್ಣು ವಿಶ್ಲೇಷಣೆ, ಪೆಸ್ಟಿಸೈಡ್ ಬಳಕೆ, ಬೆಳೆ ನಿರ್ವಹಣೆ ಇತ್ಯಾದಿ ಎಲ್ಲವನ್ನು AI ಬಳಸಿಕೊಂಡು ನಿಖರವಾಗಿ ನಿರ್ವಹಿಸಬಹುದು. ರೈತರು ಈಗ ಡ್ರೋನ್ ಹಾಗೂ ಸೆನ್ಸರ್‌ಗಳ ಸಹಾಯದಿಂದ ಭೂಮಿಯ ಸ್ಥಿತಿಯನ್ನು ತಿಳಿದುಕೊಳ್ಳುತ್ತಿದ್ದಾರೆ.

3. ಆರೋಗ್ಯ ಮತ್ತು ವೈದ್ಯಕೀಯ: ರೋಗ ಪತ್ತೆ, ಚಿಕಿತ್ಸೆ ಮಾದರಿಗಳ ಶಿಫಾರಸು, ಔಷಧ ಅಭಿವೃದ್ಧಿ – ಇವೆಲ್ಲೆಲ್ಲವೂ AI ಸಹಾಯದಿಂದ ಸಾಧ್ಯವಾಗಿದೆ. ಇಂದು ಕೇವಲ ಕೆಲವು ಸೆಕೆಂಡುಗಳಲ್ಲಿ ಕ್ಯಾನ್ಸರ್ ಅಥವಾ ಹೃದಯ ಸಂಬಂಧಿತ ಸಮಸ್ಯೆಗಳ ಪತ್ತೆ ಮಾಡಲು ಸಾಫ್ಟ್‌ವೇರ್‌ಗಳು ಸಿದ್ಧವಿವೆ.

4. ಉದ್ಯಮ ಮತ್ತು ಉದ್ಯೋಗ: ಆಟೋಮೇಶನ್, ಡೇಟಾ ಅನಾಲಿಸಿಸ್, ಗ್ರಾಹಕ ಸೇವೆಗಳಲ್ಲಿ ಚಾಟ್‌ಬಾಟ್‌ಗಳ ಬಳಕೆ AI ನ್ನು ಕೇಂದ್ರವಾಗಿಟ್ಟುಕೊಂಡಿದೆ. ಇದರಿಂದ ಕಾರ್ಯಕ್ಷಮತೆ ಹೆಚ್ಚಾಗಿದೆ, ಆದರೆ ಕೆಲವೊಂದು ಕಡೆ ಇದರಿಂದ ನಿರುದ್ಯೋಗ ಸಮಸ್ಯೇಯೂ ಕೂಡ ಉಂಟಾಗಿದೆ.

5. ಸಾಮಾಜಿಕ ಮಾಧ್ಯಮ ಮತ್ತು ಕಲ್ಪನೆಯ ದುನಿಯಾ: ಇಂದು ನಾವು ನೋಡುತ್ತಿರುವ ಚಿತ್ರಗಳ ಫಿಲ್ಟರ್‌ಗಳು, ವೈಯಕ್ತಿಕ ಆಧಾರಿತ ಪೋಸ್ಟ್‌ಗಳು,  – ಇವೆಲ್ಲವೂ AI ಯೆ! ಲೇಖಕರಾಗಿ, ಛಾಯಾಗ್ರಾಹಕರಾಗಿ ಅಥವಾ ಕಂಟೆಂಟ್ ಕ್ರಿಯೇಟರ್ ಆಗಿ ನಾವು AI ನಿಂದ ಹೆಚ್ಚು ಪಾಠ ಕಲಿಯಬಹುದು.

            ಒಟ್ಟರೆಯಾಗಿ AI ಒಂದು ಶಕ್ತಿಶಾಲಿ ಸಾಧನ. ಇದು ಕಾಲಿಡದ ಕ್ಷೇತ್ರಗಳಿಲ್ಲ, ಇದು ನಮ್ಮ ಬದುಕನ್ನು ಸುಲಭಗೊಳಿಸುತ್ತಿದೆ, ಆದರೆ ಇದರ ಜವಾಬ್ದಾರಿ ನಮ್ಮದಾಗಿದೆ – ನಾವು ಮಾನವೀಯ ಮೌಲ್ಯಗಳನ್ನು ಕಾಪಾಡುತ್ತಾ, ಈ ತಂತ್ರಜ್ಞಾನವನ್ನು ಒಳ್ಳೆಯದಿಗಾಗಿ ಬಳಸಬೇಕಾದ ಅವಶ್ಯಕತೆ ಇದೆ ಮತ್ತೊಂದು ಕಡೆ ಅನಿವಾರ್ಯತೆಯೂ ಇದೆ. 


Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...