Skip to main content

Posts

Showing posts from July, 2025

ವಿಚಾರಗಳ ಶಕ್ತಿ – ವ್ಯಕ್ತಿತ್ವದ ಅಳಿಯದ ಬೆಳಕು

  ನಮ್ಮ ಜೀವನದಲ್ಲಿ ಬರುವ ಅನೇಕ ಪರಿಸ್ಥಿತಿಗಳು ನಮ್ಮ ಮನಸ್ಸನ್ನು ಕಲುಷಿತಗೊಳಿಸಲು ಪ್ರಯತ್ನಿಸುತ್ತವೆ. ಆದರೆ ನಮ್ಮ ವ್ಯಕ್ತಿತ್ವ – ಅದು ನಮ್ಮ ಆತ್ಮದ ಪ್ರತಿಬಿಂಬ. ಅದನ್ನು ಯಾವ ಕಾರಣಕ್ಕೂ ಬದಲಾಯಿಸಬಾರದು. ವ್ಯಕ್ತಿತ್ವವೇ ನಮ್ಮ ನಿಜವಾದ ಶಕ್ತಿ, ನಮ್ಮ ಗುರುತು. ಆದರೆ, ವಿಚಾರಗಳನ್ನು ಬದಲಾಯಿಸುವ ಸಾಮರ್ಥ್ಯ ನಮ್ಮನ್ನು ನವೀಕರಿಸುತ್ತದೆ. ಕೆಟ್ಟ ಚಿಂತನೆಗಳು ಮನಸ್ಸನ್ನು ಹಾಳು ಮಾಡುತ್ತವೆ, ಒಳ್ಳೆಯ ಚಿಂತನೆಗಳು ಜೀವನವನ್ನೇ ಬದಲಿಸುತ್ತವೆ. 🌿 ಅಸೂಯೆ, ಕಿಳಿರಿಮೆ, ಅಹಂಕಾರ – ಇವು ಮನಸ್ಸನ್ನು ಮಾತ್ರವಲ್ಲ, ಸುತ್ತಲಿನ ಜನರ ನೆಮ್ಮದಿಯನ್ನೂ ಕಸಿದುಕೊಳ್ಳುತ್ತವೆ. ಈ ವಿಷಗಳು ನಮ್ಮವರನ್ನು ಕಷ್ಟದ ಆಳಕ್ಕೆ ತಳ್ಳುತ್ತವೆ. ಸದ್ಗುಣಗಳ ಮಾರ್ಗ ಸದ್ಗುಣಗಳು – ನಂಬಿಕೆ, ಪ್ರೀತಿ, ದಯೆ, ಸಹನೆ – ಇವು ನಮ್ಮ ವ್ಯಕ್ತಿತ್ವಕ್ಕೆ ಬಲ ನೀಡುತ್ತವೆ. ಸತ್ಕಾರ್ಯಗಳು – ಸಣ್ಣ ಸಹಾಯದಿಂದ ದೊಡ್ಡ ಸೇವೆಯವರೆಗೆ – ನಮ್ಮ ಆತ್ಮವನ್ನು ಶುದ್ಧಗೊಳಿಸುತ್ತವೆ. ಯಾವ ಕಷ್ಟ ಬಂದರೂ, ಸದ್ಗುಣ ಮತ್ತು ಸತ್ಕಾರ್ಯಗಳು ನಮ್ಮನ್ನು ಪಾರು ಮಾಡುತ್ತವೆ. 🙏 ನಾವು ಯಾವಾಗಲೂ ಒಳ್ಳೆಯ ಚಿಂತನೆ, ಒಳ್ಳೆಯ ಹಾದಿ, ಒಳ್ಳೆಯ ಕಾರ್ಯಗಳಲ್ಲಿ ಮುಂದುಸರಿದರೆ – ಜೀವನ ಶಾಂತಿಯುತವಾಗುತ್ತದೆ. 🌟 ✍ ಶಿವಲಿಂಗಯ್ಯ ಕುಲಕರ್ಣಿ

ಕಾಯಕವೇ ಕೈಲಾಸ – ಬದುಕಿನ ನಿಜವಾದ ಸಾರ

  "ತನ್ನ ತಾನರಿತೋಡೆ ತನಗೆ ತಾನೇ ದೇವರು ನೋಡಾ ಕುಡಲಸಂಗಮದೇವಾ" ಈ ಜಗಜ್ಯೋತಿ ಬಸವಣ್ಣನ ವಚನದಲ್ಲಿ ಜೀವನದ ಆಳವಾದ ತತ್ತ್ವ ಅಡಗಿದೆ. ನಮ್ಮೊಳಗಿನ ಆತ್ಮಜ್ಞಾನವೇ ನಿಜವಾದ ದೇವರನ್ನು ಕಾಣುವ ದಾರಿ ಎಂದು ಬಸವಣ್ಣ ಹೇಳುತ್ತಾರೆ. ಮನುಷ್ಯ ತನ್ನೊಳಗಿನ ಶಕ್ತಿಯನ್ನು ಅರಿತಾಗ, ಅವನು ದೇವರೊಂದಿಗೆ ಒಂದಾಗುತ್ತಾನೆ. ಕಾಯಕವೇ ಕೈಲಾಸ – ಕೆಲಸವೇ ಪೂಜೆ ಬಸವಣ್ಣನ ತತ್ತ್ವದ ಕೇಂದ್ರಬಿಂದುವೇ "ಕಾಯಕವೇ ಕೈಲಾಸ" . ಇದರಲ್ಲಿ ಅವರು ತಿಳಿಸಿರುವುದು, ಯಾವುದೇ ಕೆಲಸವನ್ನು ಶುದ್ಧ ಮನಸ್ಸಿನಿಂದ, ಪ್ರಾಮಾಣಿಕತೆಯಿಂದ ಮಾಡಿದರೆ ಅದೇ ಪೂಜೆಯ ಸಮಾನ . ದೇವಾಲಯಕ್ಕೆ ಹೋಗದೆ, ಹೂವಿನ ಅರ್ಪಣೆ ಮಾಡದೆ ಇದ್ದರೂ, ಸಮಾಜಕ್ಕೆ ಉಪಯೋಗವಾಗುವ ಶ್ರಮವೇ ನಿಜವಾದ ಕೈಲಾಸ . ಒಂದು ಮಾತು, ಹಲವು ಅರ್ಥ "ಕಾಯಕವೇ ಕೈಲಾಸ" – ಈ ಒಂದು ವಾಕ್ಯ ಅನೇಕ ಅರ್ಥಗಳನ್ನು ಹೊಂದಿದೆ: ಕಾಯಕದಲ್ಲಿ ಸತ್ಯ – ಪ್ರಾಮಾಣಿಕ ಪರಿಶ್ರಮದಲ್ಲೇ ದೇವರ ಅನುಗ್ರಹ. ಕಾಯಕದಲ್ಲಿ ಸಮಾನತೆ – ಎಲ್ಲ ಕೆಲಸಗಳಿಗೂ ಗೌರವ, ಏಕೆಂದರೆ ಎಲ್ಲ ಶ್ರಮವೂ ಸಮಾನ. ಕಾಯಕದಲ್ಲಿ ಆತ್ಮಶುದ್ಧಿ – ಕೆಲಸದ ಮೂಲಕ ಆತ್ಮದ ಅರಿವು, ತೃಪ್ತಿ. ಇದುವೇ ಜೀವನದ ಸಾರ ಬಸವಣ್ಣ ಹೇಳಿದ ತತ್ತ್ವ ಕೇವಲ ವಚನಗಳಲ್ಲಿ ಮಾತ್ರವಲ್ಲ, ಬದುಕಿನಲ್ಲಿ ಅನುಸರಿಸುವುದಕ್ಕೆ. ಶ್ರಮವಿಲ್ಲದೆ ಜೀವನದಲ್ಲಿ ಶಾಂತಿ ಇಲ್ಲ. ಪ್ರಾಮಾಣಿಕ ಕೆಲಸ ಮಾಡಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸ್...

"ಅಂತರಾತ್ಮ – ಅಮೂಲ್ಯ ರತ್ನ | ನೆಮ್ಮದಿ, ಖುಷಿ ಯಶಸ್ಸಿನ ನಿಜವಾದ ಮಾರ್ಗ"

                                       ಅಂತರಾತ್ಮಾ ಅಮೂಲ್ಯರತ್ನದಿ, ಕರ್ತೃ,ಕ್ರಿಯಾ,ಕರ್ಮಗಳಾದಿಯಾಗಿ, ಬರೆದುಕೊ ದೇಹವೆಂಬ ದೇಗುಲದ, ಹೃದಯವೆಂಬ ತಾಳೆಗರಿಯಲಿ,  ಎಲ್ಲಾ ಕಹಿಯ ಬಿಟ್ಟು ಸಿಹಿಯ ಹಿಡಿದಿಟ್ಟುಕೊ,  ಮನಸಿನ ನೆಮ್ಮದಿ, ಖುಷಿ , ಅದುವೇ ಯಶಸ್ಸಿನ ಸ್ವಾರಸ್ಯ  ನೋಡೊ "ಮುದ್ದುಮಾನವ"..  ಅಂತರಾತ್ಮ – ಜೀವನದ ಅಮೂಲ್ಯ ರತ್ನ ಜೀವನದ ಪಯಣದಲ್ಲಿ ಅತ್ಯಮೂಲ್ಯವಾದ ಆಸ್ತಿ ಧನ ಅಥವಾ ಸ್ಥಾನಮಾನವಲ್ಲ, ನಮ್ಮ ಅಂತರಾತ್ಮ . ಅದು ನಮ್ಮನ್ನು ಸತ್ಯದ ದಾರಿಯಲ್ಲಿ ನಡೆಸುವ ಶ್ರೇಷ್ಠ ಮಾರ್ಗದರ್ಶಕ. ಕರ್ತೃ, ಕ್ರಿಯಾ, ಕರ್ಮ – ಬದುಕಿನ ತ್ರಿಕೋನ ಕರ್ತೃ : ನೀನು – ನಿರ್ಧಾರ ಮಾಡುವವನು. ಕ್ರಿಯಾ : ನಿನ್ನ ಕಾರ್ಯಗಳು – ನಿನ್ನ ಚಿಂತನೆಗಳ ಪ್ರತಿಬಿಂಬ. ಕರ್ಮ : ನಿನ್ನ ಕ್ರಿಯೆಗಳ ಫಲ – ನಿನ್ನ ಜೀವನದ ವಾಸನೆ. ಈ ಮೂರು ಸರಿಯಾಗಿ ಹೊಂದಿದಾಗ ಜೀವನದಲ್ಲಿ ಸಮತೋಲನ ಉಂಟಾಗುತ್ತದೆ. ಹೃದಯ – ತಾಳೆಗರಿ ಹೃದಯವನ್ನು ತಾಳೆಗರಿಯಂತೆ ಶುದ್ಧವಾಗಿಟ್ಟುಕೊಳ್ಳುವದು: ಕೆಟ್ಟದನ್ನು ಅಳಿಸಿಬಿಡು,  ಒಳ್ಳೆಯದನ್ನು ಬರೆದುಕೊ, ಸಿಹಿಯನ್ನು ಹಿಡಿದಿಟ್ಟುಕೊ. ಅಹಂಕಾರ, ಕೋಪ, ದ್ವೇಷ ತೊರೆದು ಪ್ರೀತಿ, ಕರುಣೆ, ಕ್ಷಮೆ ಬರೆಯಿರಿ. ದೇಹ – ದೇವಾಲಯ ದೇಹವೇ ದೇವಾಲಯ. ಶುದ್ಧ ಮನಸ್ಸು, ಒಳ್ಳೆಯ ...

ಅಂತರಾತ್ಮದ ಅರಿವು: ಶಾಶ್ವತ ಸತ್ಯದ ಪಥ

                                                      ಮನುಷ್ಯನ ಕಣ್ಣಿಗೆ ಕಾಣುವದು ಸುಳ್ಳಲ್ಲ,  ಕಣ್ಣಿಗೆ ಕಾಣದೆ ಇರುವದು ಕೂಡಾ ಸುಳ್ಳಲ್ಲ,  ಈ ಎರಡರ ಮಧ್ಯೆ ಉಂಟಾಗುವ ಅಂತರಾತ್ಮದ ಅರಿವೇ  ಶಾಶ್ವತ ಸತ್ಯನೋಡಾ ಮುದ್ದುಮಾನವ.  ಶಿವಲಿಂಗಯ್ಯ ಕುಲಕರ್ಣಿ. ಅಂತರಾತ್ಮದ ಅರಿವು: ಶಾಶ್ವತ ಸತ್ಯದ ಪಥ ✍️ ಶಿವಲಿಂಗಯ್ಯ ಕುಲಕರ್ಣಿ ಮನುಷ್ಯನ ಜೀವನದಲ್ಲಿ ಕಣ್ಣು ಮುಖ್ಯವಾದ ಪಾತ್ರವನ್ನ ನಿರ್ದೆವಹಿಸುತ್ತವೆ. ಕಣ್ಣುಗಳಿಂದ ನಾವು ಜಗತ್ತನ್ನು ನೋಡುತ್ತೇವೆ, ಸತ್ಯಾಸತ್ಯಗಳನ್ನು ಗುರುತಿಸಲು ಪ್ರಯತ್ನಿಸುತ್ತೇವೆ. "ಕಣ್ಣಿಗೆ ಕಾಣುವದು ಸುಳ್ಳಲ್ಲ, ಕಣ್ಣಿಗೆ ಕಾಣದೆ ಇರುವದು ಕೂಡಾ ಸುಳ್ಳಲ್ಲ" ಎಂಬ ಈ ಸಾಲುಗಳು ಗಂಭೀರವಾದ ತತ್ತ್ವವನ್ನು ವ್ಯಕ್ತಪಡಿಸುತ್ತವೆ. ಕಣ್ಣಿಗೆ ಕಾಣುವ ಎಲ್ಲಾ ವಿಷಯಗಳು ನಿಜವಾಗಿರಬಹುದು, ಆದರೆ ಪ್ರತಿಯೊಂದು ನಿಜವಲ್ಲ. ಹೀಗೆಯೇ, ಕಣ್ಣಿಗೆ ಕಾಣದ ಕೆಲವು ವಿಷಯಗಳು ಸುಳ್ಳು ಎಂದು ಹೇಳಲಾಗುವುದಿಲ್ಲ. ಪ್ರೀತಿ, ನಂಬಿಕೆ, ಭಕ್ತಿ, ಆತ್ಮಶಕ್ತಿ – ಇವುಗಳನ್ನು ಕಾಣಲು ಸಾಧ್ಯವಿಲ್ಲ, ಆದರೆ ಅವುಗಳ ಅಸ್ತಿತ್ವವನ್ನು ನಾವು ಹೃದಯದಿಂದ ಅನುಭವಿಸಬಹುದು. ಅಂತರಾತ್ಮದ ಅರಿವು ಎಂಬುದು ಈ ಎರಡು ಅಂಶಗಳ ನಡುವಿನ ಸೇತುವೆಯಾಗಿದೆ. ಅದು ನಮ್...

ಜ್ಞಾನ, ಶ್ರಮ, ಮತ್ತು ಕಾಳಜಿಯ ಉ.ಕರುನಾಡಿಗೆ ಏಕೆ ಭಾರತೀಯ ಏರೋಸ್ಪೇಸ್‌ನಂತಹ ಯೋಜನೆಗಳು ಬರಬಾರದು?

                                                         ಉತ್ತರಕರ್ನಾಟಕ  –  ಇದು   ಕೇವಲ   ಒಂದು   ಭೌಗೋಳಿಕ   ಪ್ರದೇಶವಲ್ಲ ,  ಇದು ಶ್ರಮ ,  ತಾಳ್ಮೆ,ಶಾಂತಿ   ಮತ್ತು   ಜ್ಞಾನದ   ಪವಿತ್ರಭೂಮಿ .  ಆದರೂ   ಈ   ನಾಡು   ನಿರ್ಲಕ್ಷ್ಯಕ್ಕೆ   ಒಳಗಾಗಿರುವ   ಸತ್ಯವನ್ನು    ಅನೇಕರು   ಮನಗಂಡಿದ್ದಾರೆ .            ಈ   ನಾಡಿನ   ಬಡತನವೂ   ಶ್ರಮದ   ಫಲವಲ್ಲ , ಅದುನಿರ್ಲಕ್ಷ್ಯದಶಾಪ .  ಸಾವಿರಾರು   ಎಕರೆ   ಭೂಸಂಪತ್ತು ,  ಮಾನವಶಕ್ತಿ   ಇರುವ   ಈನಾಡಿನಲ್ಲಿ   ಟೇಕ್ನಾಲಜಿಯ   ಆಧಾರಿತ   ಉದ್ಯಮಗಳಿಲ್ಲ , ಸಂಶೋಧನಾ     ಕೇಂದ್ರಗಳಿಲ್ಲ ,  ನಾಡಿನಪರಂಪರೆಯನ್ನುಗೌರವಿಸುವ   ಜವಾಬ್ದಾರಿಗಳಿಲ್ಲ .    ಏಕೆ ?   " ಸಮಗ್ರ ಕರ್ನಾಟಕ ಸಾವಿರಾರು ವರ್ಷಗಳ ಇತಿಹಾಸವನ್ನು ಹೊತ್ತು ಬಂದಿದೆ . ಹಳೆ ಯುಗದಲ್ಲಿ ಇಂದಿನ ವ...