ಹಿಂದಿನ ಕರ್ಮ ಬೆನ್ನಟ್ಟಿ ಬರುತಿರಲು, ವಾಸ್ತವದ ಅರಿವು ನೆಲೆಗಟ್ಟಿನಲ್ಲಿ ಕರ್ಮವ ಕಳೆದುಕೊ ಕಣ್ಣಿಟ್ಟು , ಅರಿವಿನ ನೆಲೆಯಲ್ಲಿ ಮನಸಿಟ್ಟಿ ಜೀವನ ಬಂಗಾರ ಮಾಡಿಕೊ, ಮದ್ದುಮಾವನ. ಲೇಖಕ: ಶಿವಲಿಂಗಯ್ಯ ಕುಲಕರ್ಣಿ, ಕಾವ್ಯ ಡಿಜಿಟಲ್ ಗಂಗಾವತಿ ಹಿಂದಿನ ಕರ್ಮ ನಮ್ಮ ನೆರಳು: ನಾವು ಇಂದು ಅನುಭವಿಸುವ ಹಲವಾರು ಘಟನೆಗಳು ಕೇವಲ ಇವತ್ತಿನ ಫಲವಲ್ಲ, ಅದು ನಮ್ಮ ಹಿಂದಿನ ಕರ್ಮಗಳ ಪ್ರತಿಫಲ. ಹಿಂದಿನ ದಿನಗಳಲ್ಲಿ ನಾವು ಮಾಡಿದ ಒಳ್ಳೆಯದೋ, ಕೆಟ್ಟದೋ ಕರ್ಮಗಳು ನಮ್ಮನ್ನು ಅನುಸರಿಸುತ್ತವೆ. ಅದನ್ನು ತಪ್ಪಿಸಲಾಗದು, ಬದಲಾಯಿಸಲಾಗದು. ಆದರೆ, ಅದು ನಮ್ಮನ್ನು ಬೆನ್ನಟ್ಟಿ ಬರುತ್ತದೆ ಎಂಬ ಸತ್ಯವನ್ನು ಅರಿಯುವುದು ಮುಖ್ಯ. ಅರಿವೇ ಶಕ್ತಿ: ಹಿಂದಿನ ಕರ್ಮಗಳ ಭಾರವನ್ನು ಎಳೆಯುತ್ತಿರುವಾಗ, ಅದು ನಮ್ಮ ಕೈಯಲ್ಲಿ ಇಲ್ಲ ಎಂಬ ಭ್ರಮೆಯಲ್ಲ ಬದುಕಬೇಡಿ. ಏಕೆಂದರೆ ಈಗಿನ "ಅರಿವು" ನಮ್ಮ ಕೈಯಲ್ಲಿದೆ. ಅರಿವಿನಿಂದ ನಾವು ನಮ್ಮ ಮುಂದಿನ ಹಾದಿಯನ್ನು ರೂಪಿಸಬಹುದು. ನಮ್ಮೊಳಗಿನ ಜಾಗೃತಿ, ನಮ್ಮ ಮನಸ್ಸು ಹೇಗೆ ಕೆಲಸ ಮಾಡಬೇಕು ಎಂಬುದರ ಮೇಲೆ ನಮ್ಮ ಭವಿಷ್ಯ ಅಡಹುಕೊಂಡಿದೆ. ಕರ್ಮವ ಕಳೆದುಕೊ ಕಣ್ಣಿಟ್ಟು: ಪಾಪ-ಪುಣ್ಯದ ಲೆಕ್ಕಾಚಾರದಿಂದ ಹೊರಬರಲು ಒಂದು ಮಾತ್ರ ದಾರಿ ಇದೆ – ನಿಷ್ಕಾಮ ಕರ್ಮ. ಕರ್ಮವನ್ನು ಮಾಡುವಾಗ ಫಲದ ನಿರೀಕ್ಷೆ ಇಲ್ಲದಿದ್ದರೆ, ಅದು ಶುದ್ಧವಾಗುತ್ತದೆ. ಸುದೃಢವಾದ ಮನಸ್ಸಿನಿಂದ, ದೃಢ ನಿಟ್ಟಿನಿಂದ, ಕರ್ಮವನ್ನು ಕಳೆದುಕೊಳ್ಳಬೇ...
" ಇತಿಹಾಸ ಮತ್ತು ಕಥೆಗಳ ಲೋಕ" "Confidence, Creativity, and Culture